Wednesday, April 20, 2016

Neeti Shataka Shloka 15

ಕೇಯೂರಾಣಿ ನ ಭೂಷಯಂತಿ ಪುರುಷಂ ಹಾರಾ ನ ಚಂದ್ರೋಜ್ವಲಾ
ನ ಸ್ನಾನಂ ನ ವಿಲೇಪನಂ ನ ಕುಸುಮಂ ನಾಲಂಕೃತಾ ಮೂರ್ಧಜಾಃ |
ವಾಣ್ಯೇಕಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾ ಧಾರ್ಯತೇ
ಕ್ಷಿಯಂತೇsಖಿಲಭೂಷಣಾನಿ ಸತತಂ ವಾಗ್ಭೂಷಣಂ ಭೂಷಣಮ್ ||15||

केयूराणि न भूषयंति पुरुषं हारा न चन्द्रोज्ज्वलाः 
न स्नानं न विलेपनं न कुसुमं नालंकृता मूर्धजाः|
वाण्येका समलंकरोति पुरुषं या संस्कृता धार्यते
क्षीयन्तेखिलभूषणानि सततं वाग्भूषणं भूषणम्||15||

kēyūrāṇi na bhūṣayanti puruṣaṁ hārā na candrōjjvalāḥ
na snānaṁ na vilēpanaṁ na kusumaṁ nālaṅkr̥tā mūrdhajāḥ |
vāṇyēkā samalaṅkarōti puruṣaṁ yā saṁskr̥tā dhāryatē
kṣiyantē'akhilabhūṣaṇāni satataṁ vāgbhūṣaṇaṁ bhūṣaṇam ||15||

ಛಂದಸ್ಸು : ಇದು ಶಾರ್ದೂಲ ವಿಕ್ರೀಡಿತ ವೃತ್ತದಲ್ಲಿದೆ... 19 ಅಕ್ಷರಗಳ 4 ಪಾದದ ಒಟ್ಟಾರೆ 76 ಅಕ್ಷರಗಳ ಛಂದಸ್ಸು...

Meter: This verse is in the Śārdūla vikrīḍita meter which is 19 x 4 = 76 syllables.

ವಿದ್ಯೆಯಿಂದ, ಜ್ಞಾನದಿಂದ ಮೂಡಿಬರುವ ಮಾತುಗಾರಿಕೆಯೆ ವಿದ್ವಾಂಸರಿಗೆ ಭೂಷಣ ಹಾಗೂ ಬಹಳ ಹಿಂದೆ ನಮ್ಮ ದೇಶದಲ್ಲಿ ಗಂಡಸರ ಮತ್ತು ಹೆಂಗಸರ ಅಲಂಕಾರದ ರೀತಿಗಳು ಏಕ ಪ್ರಕಾರವಾಗಿದ್ದವು ಎಂಬುದನ್ನೂ ಕೂಡ ತೋರಿಸಿಕೊಟ್ಟ ಶ್ಲೋಕವಿದು...  (ಉದ್ದಕೂದಲು, ಕೂದಲನ್ನು ಬಾಚಿ ಕಟ್ಟುವ ವಿಧಾನ, ಹೂ ಮುಡಿವುದು ಇತ್ಯಾದಿ...)

ಹಿಂದೆ ಅಲಂಕಾರದಲ್ಲಿ ಬಳಸಲಾಗುತ್ತಿದ್ದ ಚಿನ್ನದ ಆಭರಣಗಳಾದ ವಂಕಿ , ಕೈಗೆ ಬಳೆ, ಕಿವಿಗೆ ಓಲೆ- ಕರ್ಣಕುಂಡಲ (Ear Ring) ಸೊಂಟಕ್ಕೆ ಡಾಬು, ತೋಳುಗಳ ಮೇಲೆ ಧರಿಸುವ ಚಿನ್ನದ ಆಭರಣಗಳು, ಕೊರಳಲ್ಲಿ ಪ್ರಕಾಶಮಾನವಾಗಿ ಧರಿಸುವ  ಹೊಳೆವ ಬಿಳಿಯ ಮುತ್ತಿನಹಾರ, ಚಂದ್ರಹಾರಇವೆಲ್ಲ ಒಬ್ಬ  ಗಂಡಸಿಗೆ ಅಥವಾ ಒಬ್ಬ ವಿದ್ವಾಂಸನಿಗೆ ಅಲಂಕಾರಗಳಾಗಲಾರವು... ಯಾವುದೇ ಆಭರಣ ಧರಿಸುವುದರಿಂದ ನಾವು ಚಂದ ಕಾಣುವುದಲ್ಲ.... ನಮ್ಮ ಮೈಯಲ್ಲಿ ಆಭರಣ ಬಂದಾಗ, ನಮ್ಮಿಂದ ಆಭರಣ ಚೆನ್ನಾಗಿ ಕಾಣಬೇಕು... ಅದು ನಿಜವಾದ ಲಕ್ಷಣ...

ಸ್ನಾನ, ಗಂಧಾನುಲೇಪನ (ಈಗಿನ ಕಾಲದಲ್ಲಿ ಬಳಕೆಯಲ್ಲಿರುವ ಬಗೆಬಗೆಯ ಸೆಂಟ್ಗಳು)  ತಲೆಕೂದಲಿನ ವಿನ್ಯಾಸ, ಬಗೆಬಗೆಯ ಹೂಗಳಿಂದ ತಲೆಗೂದಲ ಅಲಂಕಾರ...ಇವಾವೂ ಒಬ್ಬ ವಿದ್ವಾಂಸನಿಗೆ ಉತ್ತಮ ಅಲಂಕಾರಗಳೆನಿಸಿಕೊಳ್ಳಲಾರವು....

ಕೇಶವಿನ್ಯಾಸದ ಬಗೆಗೆ, ಹಿಂದೆ ಬ್ರಾಹ್ಮಣರಲ್ಲಿ ನಾಕು ವಿಧವಾಗಿದ್ದವು... ಅದರಿಂದ ಅವರು ಯಾವ ವೇದಕ್ಕೆ ಸಂಬಂಧಪಟ್ಟವರು ಎಂಬುದಕ್ಕೆ ಆಯಾ ಹೇರ್ ಸ್ಟೈಲ್ ಸಂಕೇತವಾಗಿತ್ತು.

ಋಗ್ವೇದಿಗಳ ಚಂಡಿಕೆ ಗೋಪಾದದಷ್ಟು ಮಾತ್ರ ಇರುತ್ತಿತ್ತು, ಮಿಕ್ಕೆಲ್ಲ ಕೂದಲು ಬೋಳಿಸುತ್ತಿದ್ದರು... ಯಜುರ್ವೇದಿಗಳ ಚಂಡಿಕೆ ಸ್ವಲ್ಪ ಜಾಸ್ತಿ ಮುಂಭಾಗದಲ್ಲಿ ಅರ್ಧಚಂದ್ರಾಕಾರದಂತೆ ತೆಗೆದು ಹಿಂದೆ ಉದ್ದಕೂದಲು ಬಿಡುತ್ತಿದ್ದರು....  ಸಾಮವೇದಿಗಳು ಹೆಂಗಸರಂತೆ ಪೂರ್ತ  ಉದ್ದಕೂದಲು ಇಟ್ಟುಕೊಳ್ಳುತ್ತಿದ್ದರು....  ಅಥರ್ವವೇದಿಗಳು ಪೂರ್ತ ತಲೆ ಬೋಳಿಸಿಕೊಳ್ಳುತ್ತಿದ್ದರು...

ಕ್ಷತ್ರಿಯರಲ್ಲಿ ಕಾಗೆಯ ರೆಕ್ಕೆಯಂತೆ ಬೈತಲೆಯಿಂದ ಕೂಡಿದ ಉದ್ದ ಕೂದಲು ಬಿಡುತ್ತಿದ್ದರು... ಆದ್ದರಿಂದಲೇ ರಾಮಾಯಣದಲ್ಲಿ, ರಾಮಚಂದ್ರನನ್ನು "ಕಾಕ ಪಕ್ಷ ಧರಃ" ಅಂತ ಕರೆಯುತ್ತಾರೆ...

ಈ ಕೇಶಾಲಂಕಾರಗಳೆಲ್ಲ ಕೇವಲ ವೇದಕ್ಕೆ ಸಂಬಂಧಪಟ್ಟವಾಗಿದ್ದವು... ಆದ್ದರಿಂದ ಇವೂ ಕೂಡ ಪುರುಷರಿಗೆ ಅಲಂಕಾರವೆನಿಸಿಕೊಳ್ಳುವುದಿಲ್ಲ...

ಮನುಷ್ಯನಿಗೆ ಅಲಂಕಾರ ಅಂದರೆ "ಮಾತುಗಾರಿಕೆ"... ರಾಮಚಂದ್ರ ಕಾಡಿನಲ್ಲಿ ಮೊತ್ತಮೊದಲು ಹನುಮಂತನನ್ನು ಭೇಟಿಯಾದಾಗ, "ಹನುಮಂತ ಎಂಥ ಚೆಂದ ಮಾತನಾಡಿದ, ಅಷ್ಟು ಹೊತ್ತು ಮಾತನಾಡಿಯೂ ಒಂದೇ ಒಂದು ತಪ್ಪು ಶಬ್ದ ಅವನ ಬಾಯಿಯಿಂದ ಹೊರಬೀಳಲಿಲ್ಲ " ಅಂತ ಸಂತೋಷದಿಂದ ಹನುಮಂತನನ್ನು ಹೊಗಳುತ್ತಾನೆ... ಅಂಥಾ "ಮಾತುಗಾರಿಕೆಯೇ" ನಿಜವಾದ ಅಲಂಕಾರ ಮನುಷ್ಯನಿಗೆ...

ಒಬ್ಬ ಜ್ಞಾನಿಗೆ ಅಥವಾ ವಿದ್ವಾಂಸನಿಗೆ  ಸುಸಂಸ್ಕೃತವಾದ ಅಂದರೆ ಸಂಸ್ಕಾರಗೊಂಡ ಮಾತೇ ಅಲಂಕಾರ... (ವಾಗ್ಭೂಷಣಂ ಭೂಷಣಂ)... ರಾಮಾಯಣದಲ್ಲಿ ಹನುಮಂತನನ್ನು ಒಂದು ಕಡೆ "ಲಕ್ಷ್ಮಣ" ಅಂತ ಸಂಬೋಧಿಸಿದ್ದಾರೆ ವಾಲ್ಮೀಕಿ, "ಲಕ್ಷ್ಮಣ" ಅಂದರೆ ಲಕ್ಷಣವಾಗಿ ಒಂದೂ ಅಪಶಬ್ದ ಬಾರದಂತೆ ಸ್ವಚ್ಛವಾಗಿ ಮಾತನಾಡುವವನು ಅಂತಲೇ ಅರ್ಥ... "ಅದೇ ನಿಜವಾದ ಆಭರಣ", ಉಳಿದೆಲ್ಲ ಆಭರಣಗಳು ಕಳೆದೊ, ಸವೆದೊ, ಮುರಿದೊ, ಹೂ ಮುಂತಾದವು ಬಾಡಿಯೋ ನಾಶವಾಗಿ ಹೋಗಬಹುದು, ಆದರೆ ವೇದಾದಿ ಶಾಸ್ತ್ರ ಗ್ರಂಥಗಳ ಆಳವಾದ ಅಧ್ಯಯನದಿಂದ ಹೊರಹೊಮ್ಮಿದ ನುಡಿಮುತ್ತುಗಳು ಮಾತ್ರ ಎಂದೂ ನಾಶವಾಗದ ಆಭರಣಗಳು !! 
🔹🔹🔹

This sloka shows us that embellishment comes from oration that is backed by learning/ knowledge and also that, in our country, vesture/ ornamentation used to be gender neutral i.e. similar for both men and women, in the good old days… (long hair, coiffure, the wearing of flowers etc., …)

In the ancient times, jewelry used in ornamentation namely bracelets, bangles, amulets, ear rings, waist straps, white pearl necklaces, the Candrahāra etc., These did not decorate a scholar … Good features are not reflected in our wearing of ornaments to look good but, in the ornaments looking good when we wear them …

Bathing, application of sandal paste (these days a wide variety of perfumes are used), various hairstyles, using various flowers to decorate the hair on one’s head … None of these would define the adornments of scholars …

In terms of types of hairdo, in the olden days, brahmaṇas had four variants … Hairstyle signified the Vēda that related to them …

The Ṛgvēdis had a tuft on the crown as much as a cow’s hoof; the rest were clean shaven … Yajurvēdis used to sport a crescent like dressing in the front and long hair at the back of the head … Sāmavēdis used to have hair much the same as women have in length and quantum … Atharvavēdis used to have their heads clean shaven …

Kshtriyas, sported long hair that used to be parted on the top into two side flanks, resembling the wings of a crow, that is how in Rāmāyaṇa, Rāma is called ‘काक पक्ष धरः (Kāka pakṣa dharaḥ)
All these hairstyles were merely connected to the Vēdas … Therefore these cannot be considered as decorative for men …

True decoration for man is his oration … When Rāmacandra first ran into Hanumān in the forest, “How wonderful is his speech; In his entire long speech there was not a single wrong word uttered,” is how he appreciated Hanumān out of joy … Speech of that order is truly a jewel in a human’s persona …    

To a learned one or erudite one, cultured or properly shaped speech is ornamentation … (वाग्भूषणं भूषणम् vāgbhūṣaṇaṁ bhūṣaṇam) …  In Rāmāyaṇa, Valmiki addresses Hanumān as ‘Lakṣaṇa,’ which means one whose speech is full of good features and flows flawlessly … “That is a true jewel, the rest wear out, are stolen, lost, broken, if like flowers they become stale and perish; however, speech that flows from the deep learning of the Vedas, is an imperishable ornament!’

Thursday, March 3, 2016

Neeti Shataka Shloka 14

ಅಂಭೋಜಿನೀ ವನವಿಹಾರವಿಲಾಸಮೇವ
ಹಂಸಸ್ಯ ಹಂತಿ ನಿತರಾಂ ಕುಪಿತೋ ವಿಧಾತಾ |
ನ ತ್ವಸ್ಯ ದುಗ್ಧಜಲಭೇದವಿಧೌ ಪ್ರಸಿದ್ಧಾಂ
ವೈದಗ್ಧ್ಯಕೀರ್ತಿಮಪಹರ್ತುಮಸೌ ಸಮರ್ಥಃ||14||

अम्भोजिनी वनविहारविलासमेव
हंसस्य हन्ति नितरां कुपितो विधाता|
न त्वस्य दुग्धजलभेदविधौ प्रसिद्धां
वैदग्ध्यकीर्तिमपहर्तुमसौ समर्थः||14||

ambhōjinī vanavihāravilāsamēva
hansasya hanti nitarāṁ kupitō vidhātā |
na tvasya dugdhajalabhēdavidhau prasid'dhāṁ
vai dagdhyakīrtimapahartumasau samarthaḥ||14||

*     *     *     *     *

ಛಂದಸ್:
ಈ ಶ್ಲೋಕ ವಸಂತತಿಲಕಾ ವೃತ್ತದಲ್ಲಿದೆ...
"ಉಕ್ತಾ ವಸಂತತಿಲಕಾ ತಭಜಾ ಜಗೌಗಃ" ಎಂಬುದು ಈ ಛಂದಸ್ಸಿನ ಲಕ್ಷಣ...

Meter:
This stotra is in ‘वसन्त तिलक - Vasanta Tilaka’ meter. This is 14 x 4 = 56 syllables in all with a pause after the eighth. The meter is described as “उक्ता वसन्ततिलक तभजा जगौगः - Uktā vasantatilaka tabhajā jagaugaḥ”

*     *     *     *     *

ಒಬ್ಬ ರಾಜನಿಗೆ ಅಥವಾ  ಶ್ರೀಮಂತನಿಗೆ ಒಬ್ಬ ವಿದ್ವಾಂಸನನ್ನು ನಿಯಂತ್ರಿಸಬೇಕು ಎಂಬ ದುಷ್ಟಬುದ್ಧಿ ಬಂದರೆ, ಆ ರಾಜ ಏನು ಮಾಡಬಹುದು ಅನ್ನುವುದನ್ನು ಒಂದು ಸುಂದರ ದೃಷ್ಟಾಂತದ ಮೂಲಕ ಭರ್ತೃಹರಿ ವಿವರಿಸುತ್ತಾನೆ....

ಒಂದು ಹಂಸ ಇದೆ.  ಚತುರ್ಮುಖ ಬ್ರಹ್ಮನಿಗೇ ಆ ಹಂಸದ ಮೇಲೆ ಸಿಟ್ಟು ಬಂದಿದೆ ಅಂತ ಇಟ್ಟುಕೊಳ್ಳೋಣ... ಆಗ ಬ್ರಹ್ಮನೇ ಆದರೂ ಕೂಡ ಆ ಹಂಸಕ್ಕೆ ಏನುತಾನೆ ಮಾಡಿಯಾನು?

ಕಮಲದ ಹೂವಿನ ಸರೋವರದಲ್ಲಿ ವಿಹರಿಸುವುದು ಹಂಸಗಳಿಗೆ ಬಹಳ ಇಷ್ಟ ...  ಅದನ್ನು ನೋಡುವವರಿಗೂ ಒಂದು ಸಂಭ್ರಮ...  ಕೋಪಗೊಂಡ ಬ್ರಹ್ಮ ಆ ಪರಿಸರವನ್ನು ನಾಶಮಾಡಿ ಆ ಹಂಸಕ್ಕೆ ತೊಂದರೆ ಕೊಡಬಹುದಷ್ಟೇ ಹೊರತು ಹಂಸದ ಗುಣವನ್ನು ನಾಶಪಡಿಸಲಿಕ್ಕೆ ಬರುವುದಿಲ್ಲ... ಹಂಸಗಳಿಗಿರುವ ವೈದುಷ್ಯ , ಬುದ್ಧಿವಂತಿಕೆ ಎಂದರೆ, ಹಾಲು-ನೀರು ಬೆರೆಸಿದಾಗ ಹಾಲನ್ನು ನೀರಿನಿಂದ ಬೇರ್ಪಡಿಸುವ ಕಲೆ. ಹಂಸಗಳಿಗಿರುವ ಆ ಶಕ್ತಿಯನ್ನು ಚತುರ್ಮುಖ ಬ್ರಹ್ಮನಿಗೂ ನಾಶಪಡಿಸಲು ಸಾಧ್ಯವಿಲ್ಲ... ಅದು ಹಂಸದ ಸ್ವಂತ ಅರ್ಹತೆ , ಸ್ವಭಾವ...

ಇಲ್ಲಿ ಚತುರ್ಮುಖನನ್ನು ಒಬ್ಬ ರಾಜನಿಗೆ ದೃಷ್ಟಾಂತ ಕೊಟ್ಟು ಹೇಳಿದ ಮಾತಿದು... ಹಾಗೆ, ಒಬ್ಬ ರಾಜ ಕೂಡ ಒಬ್ಬ ವಿದ್ವಾಂಸನ ಮೇಲೆ ಕೋಪಗೊಂಡು ಆ ವಿದ್ವಾಂಸನ ಸ್ವತ್ತು, ಸವಲತ್ತುಗಳನ್ನು ವಶಪಡಿಸಿಕೊಂಡು ಆ ವಿದ್ವಾಂಸನನ್ನು ತನ್ನ ರಾಜ್ಯದಿಂದ ಹೊರಹಾಕಬಹುದು
ಆದರೆ, ಎಂದೂ ಅವನ ವಿದ್ವತ್ತನ್ನು ಕಿತ್ತುಕೊಳ್ಳಲಾರ...  ಅದು ಜ್ಞಾನಿಯ ಅಂತರಂಗದ ಸ್ವತ್ತು... "ಸ್ವದೇಶೇ ಪೂಜ್ಯತೇ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೇ" ಎಂಬಂತೆ ಇನ್ನೊಂದು ರಾಜ್ಯದಲ್ಲಿ ಆ ವಿದ್ವಾಂಸ ಸುಖದಿಂದ ಬದುಕುತ್ತಾನೆ... ಆದ್ದರಿಂದ ಒಬ್ಬ ವಿದ್ವಾಂಸನ ಪಾಂಡಿತ್ಯದ ಸಾಮರ್ಥ್ಯವನ್ನು , ಕೀರ್ತಿಯನ್ನು ನಾಶಪಡಿಸಲು ಒಬ್ಬ ರಾಜನಿಗೂ ಸಾಧ್ಯವಿಲ್ಲ... ಆದ್ದರಿಂದ ದುಡ್ಡಿನ, ಅಧಿಕಾರದ ಅಹಂಕಾರದಿಂದ ವಿದ್ವಾಂಸರನ್ನು ಅವಮಾನಿಸಬೇಡ ಎಂದು ಒಬ್ಬ ರಾಜನಿಗೆ ಭರ್ತೃಹರಿ ಹೇಳಿದ ಬುದ್ಧಿಮಾತಿದು...

ಈ ಶ್ಲೋಕ ವಸಂತತಿಲಕಾ ವೃತ್ತದಲ್ಲಿದೆ...
"ಉಕ್ತಾ ವಸಂತತಿಲಕಾ ತಭಜಾ ಜಗೌಗಃ" ಎಂಬುದು ಈ ಛಂದಸ್ಸಿನ ಲಕ್ಷಣ...
****

Bhartruhari, through a wonderful illustration here, tells us what would happen should a King or a rich person, entertain the evil thought of keeping a watch over the scholars…

Let’s consider a swan and an eventuality where Chaturmukha Brahma turns his ire on it. He says, “Even if so, what would Brahma be able to do to the swan?”

Swans love to wander freely amongst lotuses in a lake … This scenario is exhilarating to even those get to see it … An angered Brahma, at best might be able to trouble the swan by destroying its environs but he would not be able to change the inborn nature of the swan … The erudition in swans, brilliance viz., their skilfullness in sifting milk from water, from water diluted milk. This strength of swans cannot be destroyed even by Chaturmukha Brahma … That is a swan’s innate capability and nature …

In this illustration, a statement is made, by likening  a King to Chaturmukha Brahma … In the same manner, a king too, turning his anger on a scholar may have all his assets seized, comforts denied and banish him from his kingdom. He can however not snatch away his learning … That is the scholar’s inner wealth … As is said, ‘स्वदेशे पूज्यते राजा  विद्वान् सर्वत्र पूज्यते - swadēśē pūjyatē rājā vidwan sarvatra pūjyatē’ a scholar can live happily in another kingdom too ... Therefore it is not possible for a king to obliterate the erudition, capabilities or fame of a scholar ... Bhartruhari thereby counsels a king not to insult a scholar from the backdrop of his own wealth, authority or arrogance …

Saturday, February 27, 2016

Neeti Shataka Shloka 13

ಅಧಿಗತಪರಮಾರ್ಥಾನ್ ಪಂಡಿತಾನ್  ಮಾವಮಂಸ್ಥಾಃ
ತೃಣಮಿವ ಲಘು ಲಕ್ಷ್ಮೀರ್ನೈವ ತಾನ್ಸಂರುಣದ್ಧಿ |
ಅಭಿನವಮದರೇಖಾ ಶ್ಯಾಮಗಂಡಸ್ಥಲಾನಾಂ
ನ ಭವತಿ ಬಿಸತಂತುರ್ವಾರಣಂ ವಾರಣಾನಾಮ್||13||

अधिगतपरमार्थान् पंण्डितान् मावमंस्थाः
तृणमिव लघु लक्ष्मीर्नैव तान्संरुणद्धि|
अभिनवमदरेखा श्यामगंडस्थलानां
न भवति बिसतंतुर्वारणं वारणानाम्||13||

adhigataparamārthān paṇḍitān māvamansthāḥ
tr̥ṇamiva laghu lakṣmīrnaiva tānsanruṇad'dhi |
abhinavamadarēkhā śyāmagaṇḍasthalānāṁ
na bhavati bisatanturvāraṇaṁ vāraṇānām||13||

ಈ ಶ್ಲೋಕ "ಮಾಲಿನೀ ವೃತ್ತ" ದಲ್ಲಿದೆ... 15 ಅಕ್ಷರಗಳ 4 ಸಾಲುಗಳು ಒಟ್ಟಾರೆ 60 ಅಕ್ಷರದ ಛಂದಸ್ಸು... ಪ್ರತಿಸಾಲಿನ 8ನೇ ಅಕ್ಷರಕ್ಕೆ ವಿರಾಮಕೊಟ್ಟು ಉಚ್ಚರಿಸುವುದು ಮಾಲಿನೀ ವೃತ್ತದ ಲಕ್ಷಣ...

ಹಿಂದೆಲ್ಲ ಪಂಡಿತರು ರಾಜಾಶ್ರಯ ಪಡೆದವರೇ, ಅನೇಕ ಪಂಡಿತರು ರಾಜನ ಹೊಗಳು ಭಟರೇ, ಹಾಗೆ ಮಾನ-ಸನ್ಮಾನಗಳಿಂದ, ಪ್ರಶಸ್ತಿಗಳಿಂದ ದುಡ್ಡಿನಿಂದ ಪಂಡಿತರನ್ನು ಕೊಂಡುಕೊಳ್ಳಬಹುದೇ ?... ಎಂಬ ಪ್ರಶ್ನೆಗೆ ಭರ್ತೃಹರಿ ಹೇಳುತ್ತಾನೆ,
ನಿಜವಾದ ವಿದ್ವಾಂಸರು ದುಡ್ಡಿಗೆ ಮರುಳಾಗುವುದಿಲ್ಲ....

ಹಾಗಾದರೆ ಯಾರು ನಿಜವಾದ ಪಂಡಿತರು ? ಜಗತ್ತಿನ ಮೂಲಭೂತ ಸತ್ಯವನ್ನು ಅರಿತ ವಿದ್ವಾಂಸರು ಯಾರಿದ್ದಾರೋ ಅವರು ಮಾತ್ರ ನಿಜವಾದ ಪಂಡಿತರು...
ಇಂದು ನಾವು ಪಂಡಿತ ಶಬ್ದವನ್ನು ತುಂಬಾ ಕೀಳು ಅರ್ಥದಲ್ಲಿ ಬಳಸುತ್ತಿದ್ದೇವೆ... Bookish Knowledge ಇರುವವರೆಲ್ಲ ಪಂಡಿತರಲ್ಲ... "ಪಂಡ ಅಸ್ಯ ಸಂಜಾತ ಇತಿ ಪಂಡಿತಃ"... "ಪಂಡ" ಅಂದರೆ ಅಧ್ಯಾತ್ಮದ ಅರಿವು... ಆ ಅಧ್ಯಾತ್ಮದ ಅರಿವು ಯಾರಲ್ಲಿ ಸಹಜವಾಗಿ ಹುಟ್ಟಿದೆಯೋ, ಒಲಿದು ಬಂದಿದೆಯೋ ಅವರು ಪಂಡಿತರು....

ಯಾರು ಸತ್ಯವನ್ನು ಸಾಕ್ಷಾತ್ಕರಿಸಿಕೊಂಡಿದ್ದಾರೋ ಅಂಥಹ ಜ್ಞಾನಿಗಳನ್ನು , ಎಲೈ ರಾಜನೇ !! ಎಂದಿಗೂ ತಿರಸ್ಕಾರ ಮಾಡಬೇಡ, ಅವಮಾನ ಮಾಡಬೇಡ... ನಿನಗೆ ಶ್ರೇಯಸ್ಸಾಗುವುದಿಲ್ಲ...
ಏಕೆಂದರೆ, ದುಡ್ಡಿನ ಸಂಪತ್ತು ಅವರಿಗೆ ಹುಲ್ಲಿಗಿಂತ ಕಡೆ... ನಿಜವಾದ ಜ್ಞಾನಿಯ ಪ್ರಜ್ಞೆಗೆ ಈ ದುಡ್ಡಿನರಾಶಿ ಎಂದಿಗೂ ಪ್ರತಿಬಂಧಕವಾಗುವುದಿಲ್ಲ... ದುಡ್ಡು ಅವರನ್ನು ಮೋಹಗೊಳಿಸುವುದಿಲ್ಲ...
ಅವರಿಗೆ ಅಂತರಂಗದ ಸಂಪತ್ತು ಸಿಕ್ಕಿದೆ, ಅದೇ ಅವರಿಗೆ ದೊಡ್ಡ ಸಂಪತ್ತು...

ಇದನ್ನು ಒಂದು ದೃಷ್ಟಾಂತ ಕೊಟ್ಟು ಹೇಳುತ್ತಾನೆ... ಒಂದು ಮತ್ತೇರಿದ ಆನೆ, ಅದೂ ಕೂಡ ಮೊದಲ ಬಾರಿ ಮದ ಬಂದ ಆನೆ. ಅದರ ಹತ್ತಿರ ಹೋಗಲಿಕ್ಕೆ ನುರಿತ ಮಾವುತರೂ ಹೆದರುತ್ತಾರೆ... ಹೀಗೆ ಮತ್ತೇರಿದಾಗ ಅವುಗಳ ಹಣೆಯಲ್ಲಿ ಕಪ್ಪುನೀರು ಇಳಿಯುತ್ತದೆ, ಅಂಥಹ ಕಪ್ಪಾದ ಗಂಡಸ್ಥಳವುಳ್ಳ ಆನೆಯನ್ನು ಕಮಲದ ನಾಳದಿಂದ ಕಟ್ಟಿಹಾಕುವ ಪ್ರಯತ್ನ ಮಾಡುವುದು ಎಷ್ಟು ಮೂರ್ಖತನವೋ, ಹಾಗೆ ದುಡ್ಡಿನ ಪ್ರಲೋಭನೆಯಿಂದ ಒಬ್ಬ  ವಿದ್ವಾಂಸನನ್ನು, ಪಂಡಿತನನ್ನು ಮೋಸ ಮಾಡಲಿಕ್ಕೆ ಪ್ರಯತ್ನ ಪಡುವುದು...

ಅಂಥಹ ಆಮಿಷಗಳಿಗೆ ಬಲಿಯಾದ ಪಂಡಿತರಿದ್ದರೆ ಅವರು ವಿದ್ವಾಂಸರಲ್ಲ... ಆದ್ದರಿಂದ ಎಲೈ ರಾಜನೇ, ನಿನ್ನ ದುಡ್ಡಿನ ಮದದಿಂದ ಪಾಂಡಿತ್ಯಕ್ಕೆ , ಜ್ಞಾನಕ್ಕೆ , ವಿದ್ಯೆಗೆ ಅವಮಾನ ಮಾಡಬೇಡ... ಜ್ಞಾನಕ್ಕೆ ಗೌರವ ಕೊಡದ ದೇಶ ಎಂದೂ ಮುಂದುವರೆಯುವುದಿಲ್ಲ ಬೇಗ ನಾಶಹೊಂದುತ್ತದೆ...

ಸ್ಮೃತಿಕಾರ "ಮನು" ಹೇಳಿದ ಮಾತು ಹೀಗಿದೆ:-
ವಿತ್ತಂ ಬಂಧುಃ ವಯಃ ಕರ್ಮ
ವಿದ್ಯಾಚೈವತು ಪಂಚಮೀ |
ಏತಾನಿ ಮಾನ್ಯ ಸ್ಥಾನಾನಿ 
ಗರೀಯೋ ಯದ್ಯದುತ್ತರಮ್ ||

ಸಮಾಜದ ವ್ಯಕ್ತಿಗಳನ್ನು ಅವರವರ ಸಾಧನೆಯ ಅರ್ಹತೆಗಳಿಗೆ ತಕ್ಕಂತೆ ಗೌರವಿಸಲೇಬೇಕಾದ ಐದು ಸ್ಥಾನಗಳನ್ನು ಮನು ಹೇಳಿದ : ಧನ, ಬಾಂಧವ್ಯ, ವಯೋಮಾನ, ಸಮಾಜಸೇವೆ ಮತ್ತು ವಿದ್ಯೆ...

ಆದರೆ ಆ ಗೌರವ ಸ್ಥಾನಗಳ ಪ್ರಾಮುಖ್ಯತೆ ಕೆಳಗಿನಿಂದ ಮೇಲಕ್ಕೆ ಅಂತ ಮನು ಎಚ್ಚರಿಸಿದ (ಗರೀಯೋ ಯದ್ಯದುತ್ತರಮ್) ಅಂದರೆ , ವಿದ್ಯೆಗೆ ಮೊದಲ ಮಣೆ, ಗರಿಷ್ಠ  ಸ್ಥಾನ.... ಹಣಕ್ಕೆ ಕೊನೆಯ ಮಣೆ ಕನಿಷ್ಠ ಸ್ಥಾನ.... ಆದರೆ ಇಂದು ಇದೆಲ್ಲ ಅದಲು-ಬದಲಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ...

ವಿತ್ತಂ : ಪೂರ್ವಜನ್ಮದ ಸುಕೃತದಿಂದ ಒಬ್ಬನಲ್ಲಿ ಅಪಾರ ಧನ ಸಂಗ್ರಹವಾಯಿತು, ಆತ ಅದನ್ನು ಧರ್ಮ ಕಾರ್ಯದಲ್ಲಿ , ಸಮಾಜದ ಏಳಿಗೆಗಾಗಿ ಬಳಸಿದಾಗ, ಆ ಸಂಪತ್ತು ಸದುಪಯೋಗವಾಯಿತು. ಆಗ ಸಮಾಜ ಅವನನ್ನು ಗೌರವಿಸುತ್ತದೆ..

ಬಂಧುಃ : ಹಣಕ್ಕಿಂತ ಬಾಂಧವ್ಯ ದೊಡ್ಡದು... ಹಣಕಾಸಿನ ವ್ಯವಹಾರದಲ್ಲಿ ಎಂದೂ ಬಾಂಧವ್ಯ ಕಡಿದು ಹೋಗಬಾರದು, ಆದ್ದರಿಂದ ಬಂಧುಗಳನ್ನು ಗೌರವಿಸು....

ವಯಃ : ಒಬ್ಬನಲ್ಲಿ ಹಣವಿರಬೇಕಾಗಿಲ್ಲ , ಆತ ಬಂಧುವಾಗಿರಬೇಕಾಗಿಲ್ಲ , ಕೇವಲ ವಯಸ್ಸಿನಿಂದ ಯಾರು ಹಿರಿಯರೋ ಅವರನ್ನು ಗೌರವಿಸು.. ಅವರಲ್ಲಿ ಜ್ಞಾನ ಇಲ್ಲದಿರಬಹುದು ಆದರೂ ಭಗವಂತ ಅವರೊಳಗಿದ್ದು ನಮಗಿಂತ ಹೆಚ್ಚು ಕಾಲದಿಂದ ಅವರನ್ನು ಬದುಕಿಸಿದ್ದಾನೆ ಎಂದು ವಯಸ್ಸಿಗೆ ಗೌರವ ಕೊಡು...

ಕರ್ಮ:  ಒಬ್ಬ ಸಮಾಜಸೇವೆಯನ್ನೇ ತನ್ನ ಜೀವನ ಧರ್ಮವಾಗಿರಿಸಿಕೊಂಡು ಸಮಾಜದ ಏಳಿಗೆಗಾಗಿ ನಿರಂತರ ದುಡಿಯುತ್ತಿದ್ದರೆ, ಅಂಥಹ ವ್ಯಕ್ತಿಯಲ್ಲಿ ಹಣ ಇರಬೇಕಾಗಿಲ್ಲ , ಆತ ನಮ್ಮ  ಬಂಧುವಾಗಿರಬೇಕಾಗಿಲ್ಲ, ಅವನ ವಯೋಮಾನದ ಇತಿ-ಮಿತಿಗಳನ್ನು ನೋಡಬೇಕಾಗಿಲ್ಲ , ಸಮಾಜಕ್ಕೆ ಅವನು ಮಾಡಿದ ಉಪಕಾರ ಸ್ಮರಣೆಯಿಂದ ಅವನನ್ನು ಗೌರವಿಸು...

ವಿದ್ಯೆ :- ಸಮಾಜದಲ್ಲಿ ಒಬ್ಬ ದೊಡ್ಡ ವಿದ್ವಾಂಸ, ಜ್ಞಾನಿ ಎಲ್ಲಕ್ಕಿಂತ ಮಿಗಿಲು.. ಸರ್ವಶ್ರೇಷ್ಠ... ನಮ್ಮ ಪೂರ್ವೀಕರು ವಿದ್ಯಾಕ್ಷೇತ್ರಕ್ಕೆ ಕೊಟ್ಟಂತಹ ಗೌರವವನ್ನು ಇನ್ನಾವುದೇ ಕ್ಷೇತ್ರಕ್ಕೂ ಕೊಡಲಿಲ್ಲ.. ಜ್ಞಾನಪ್ರಸಾರದಿಂದಲೇ ಒಂದು ಸುಂದರ ಸಮಾಜದ ನಿರ್ಮಾಣ ಸಾಧ್ಯ,  ಒಬ್ಬ ವ್ಯಕ್ತಿಯ ವಿಕಸನ ಸಾಧ್ಯ... ಆದ್ದರಿಂದಲೇ ವಿದ್ಯೆಗೆ ಮೊದಲ ಮಣೆ, ಗರಿಷ್ಠ ಸ್ಥಾನ....
ಒಂದು ಸುಭಾಷಿತದಿಂದ ಅಯಿದ ಮಾತು "ಸ್ವದೇಶೇ ಪೂಜ್ಯತೇ ರಾಜಃ ವಿದ್ವಾನ್ ಸರ್ವತ್ರ ಪೂಜ್ಯತೆ"....
                                                                       🔹🔹🔹

This is composed in 'Malini' meter which is 15 syllables x 4  = total 60 syllables long. This meter is beset with a pause after the 8th syllable in each line.

In the good old days, did all scholars enjoy royal patronage? Were many of them sycophants of royalty? Also, was it possible to buy them through recognition, titles or rewards? … These are the questions answered by Bharatruhari here …

True scholars do not yield to money …

If so, who are true scholars?

Only those who have understood the basic truth of the world, are true scholars…

The term ‘scholar’ is used in the present in a very base sense … All those who possess ‘bookish knowledge,’ are not scholarly … ‘पण्ड अस्य संजात पण्डितः (paṇḍa asya san̄jāta iti paṇḍitaḥ)’ … The term ‘paṇḍa’ implies one with spiritual awareness … Such of those to whom, spiritual awareness is a natural tendency, is an inborn facet, they are ‘paṇḍitas’ or scholars … Oh King! It is those learned ones who have experienced the insights of truth, that are scholars … Do not deprecate them at any time; do not insult them … This will not bring you glory … The treasure that money brings is valued lower than grass by them … A true scholar’s awareness is not bound by such mounds of money … Money does not enamor them …

They are enriched by their inner wealth, which they value greatly …

This he illustrates anecdotally … An elephant in rage, that too one that has become enraged for the first time! Even a seasoned mahout would fear approach such an elephant … When in such a state, a black liquid trickles from its forehead. Enticing a scholar or learned one, with money is as foolish as tethering an elephant that has such a forehead, with a tender lotus stalk …If there are scholars who are allured by such entrapments, they are not learned at all .. Oh King! As such, do not use the arrogance of your wealth to insult erudition, knowledge or learning … A country that does not respect learning does not progress; it perishes in no time …

This is what Manu, who canonized our first edicts (Manu Smr̥ti), said

वित्तं बन्धुः वयः कर्म
विद्याचैवतु पंचमी |
एतानि मान्य स्थानानि 
गरीयो यद्यदुत्तरम् ||

vittaṁ bandhuḥ vayaḥ karma
vidyācaivatu pan̄camī |
ētāni mān'ya sthānāni 
garīyō yadyaduttaram ||

Manu described the five statuses that accord due respect to each individual in the society; those that regard him/ her, as per his/ her entitlement: Money, Bonding, Age, Service to Society, and Education.
These statuses however should be regarded in the inverse order of importance (गरीयो यद्यदुत्तरम् / garīyō yadyaduttaram), cautioned Manu.  Which means, the first seat of respect is that of knowledge; money is seated the last or least in the order of respect ... The positions in the modern world is unfortunately reversed ...

Money: One may have been blessed with good wealth based on the good deeds of his previous lives. If one uses this for the betterment of the society, for righteous deeds, the wealth would be used beneficially. The society then respects him/ her for such acts ...

Bonding: Bonding in society is greater in value when compared to wealth ... Money related transactions should never result in loss of relationships ... One must give due regard to relationships/ bonding ...

Age: One need not be rich; nor be related/ linked to us in any way ... If one is senior in age, he / she must be respected ... Such a person may not be more knowledgeable too ... One should however bear in mind that God, dwelling within him/ her, has kept this person alive for greater length of time than us, and as such he/ she deserves to be respected on this count ...

Service to Society: There may be those who have ‘service to society’ as the prime object of their living and serve the society incessantly for its upliftment ... Such people need not be rich or well linked or senior in age. Respect them, remembering their good acts that help the society ...

Education/ Knowledge: A learned one, knowledgeable one in the society, is at its apex ... The level of respect accorded to the field of eductaion by our forefathers was not accorded to any other field ... Propagation of education, they considered, was the only way to build a good society, build a progressive individual ... This is how education got the pride of place, the seat of the greatest honour ...
As per a popular subhāṣita:  ‘स्वदेशे पूज्यते राजः, विद्वान् सर्वत्र पूज्यते / Svadēśē pūjyatē rājaḥ, vidvān sarvatra pūjyate’ ...

                   🙏🌸🌸🙏

Thursday, February 25, 2016

ಭರ್ತೃಹರಿಯ ನೀತಿ ಶತಕದಿಂದ ದಿಂದ ಪ್ರೇರಿತ

ಹಸಿದಿರಲಿ ಬಳಲಿರಲಿ ಮುಪ್ಪಿರಲಿ ಕುಂದಿರಲಿ,
ಸ್ವಭಾವತಹ ವನರಾಜ ಸಿಂಹವದು ಏನಾದರಾಗಿರಲಿ,
ಗಜಕುಂಭದ ಮಾಂಸದಾಸೆಯದು ಮರೆಯಾದೀತೆ?
ಹಸಿವು ಹೆಚ್ಚಿದೆಯೆಂದು ಒಣ ಹುಲ್ಲ ತಿಂದೀತೆ?
ಸ್ವಾಭಿಮಾನದ ನಿಜಜ್ಞಾನಿ ತುತ್ತನ್ನಕೆ ಕೈ ಚಾಚಲಾದೀತೆ?
ಶೀಲ ಮತಿ ಮತ ಮಾನರಕ್ಷಣೆಗೆ ಹೋರಾಡದಿರಲಾದೀತೆ?

ಮಾಂಸವಿರದ ಒಣ ಮೂಳೆಯೇ ನಾಯಿಗೆ ಸಾಕು,
ಬೇರೇನಿದ್ದರೂ ಎದುರಿಗೆ ಸಿಂಹಕೆ ಆನೆಯೇ ಬೇಕು,
ಯಾರಿದ್ದರೂ ತಮ್ಮ ಶಕ್ತಿಗನುಗುಣವಾದ ಫಲದ್ದೇ ನಿರೀಕ್ಷೆ,
ಅದನು ಪಡೆಯುವ ಪಡಿಪಾಟಲೇ ಜೀವನವೆಂಬ ಪರೀಕ್ಷೆ.

ಹುಟ್ಟು ಸಾವುಗಳ ಚಕ್ರವದು ಅಬಾಧಿತ,
ಯಾರೂ ಆಗಲಾರರು ಇದರಿಂದ ಮುಕ್ತ,
ಯಾವಜೀವಿಯ ಹುಟ್ಟು ವಂಶಕೆ ತರುವುದೋ ಕೀರ್ತಿ,
ಸಾರ್ಥಕ ಹುಟ್ಟದು ತೋರುವುದು ನಿಜ ಮುಕ್ತಿ.

ಅತಿಕಾಮಿಗಿಂತ ರೋಗಿಯಿಲ್ಲ,
ಭ್ರಾಂತಿ ಭ್ರಮೆಗಿಂತ ವೈರಿಯಿಲ್ಲ,
ಕೋಪಕ್ಕೆ ಮಿಗಿಲಾದ ಬೆಂಕಿಯಿಲ್ಲ,
ಜ್ಞಾನಿಗಿಂತ ಮಿಗಿಲಾದ ಸುಖಿಯಿಲ್ಲ.

ಬೇಕೋ ನಿನಗೆ ಹೆಸರು ಕೀರ್ತಿ,
ಬೇಡ ಪರರ ನಿಂದನೆ ಅಪಕೀರ್ತಿ,
ಸದ್ಗುಣಗಳ ಆಚರಣೆಯದು ಇರಲಿ,
ಹೆಸರು ಕೀರ್ತಿಯ ನಡತೆಯದು ತರಲಿ.

(Contributed by Shri Govind Magal)



Tuesday, February 9, 2016

Neeti Shataka Shloka 12

ಹರ್ತುರ್ಯಾತಿ ನ ಗೋಚರಂ ಕಿಮಪಿ ಕಂ ಪುಷ್ಣಾತಿ ಯತ್ಸರ್ವದಾ-
ಪ್ಯರ್ಥಿಭ್ಯಃ ಪ್ರತಿಪಾದ್ಯಮಾನಮನಿಶಂ ಪ್ರಾಪ್ನೋತಿ ವೃದ್ಧಿಂ ಪರಾಮ್|
ಕಲ್ಪಾಂತೇಷ್ವಪಿ ನ ಪ್ರಯಾತಿ ನಿಧನಂ ವಿದ್ಯಾಖ್ಯಮಂತರ್ಧನಂ 
ಯೇಷಾಂ ತಾನ್ಪ್ರತಿ ಮಾನಮುಜ್ಝತ ನೃಪಾಃ ! ಕಸ್ತೈಃ ಸಹ ಸ್ಪರ್ಧತೇ ||12||

हर्तुर्याति न गोचरं किमपि कं पुष्णाति यत्सर्वदा-
प्यर्थिभ्यः प्रतिपाद्यमानमनिशं प्राप्नोति वृद्धिम्पराम्|
कल्पांतेष्वपि न प्रयाति निधनं विद्याख्यमन्तर्धनं 
येषां तान्प्रति मानमुज्झत नृपाः! कस्तैः सह स्पर्धते||12||

harturyāti na gōcaraṁ kimapi kaṁ puṣṇāti yatsarvadā-
pyarthibhyaḥ pratipādyamānamaniśaṁ prāpnōti vr̥d'dhiṁ parām|
kalpāntēṣvapi na prayāti nidhanaṁ vidyākhyamantardhanaṁ 
yēṣāṁ tānprati mānamujjhata nr̥pāḥ! kastaiḥ saha spardhatē ||12|| 

[ಛಂದಸ್ಸು : ಶಾರ್ದೂಲವಿಕ್ರೀಡಿತ, ಹತ್ತೊಂಬತ್ತು ಅಕ್ಷರಗಳ, ನಾಲ್ಕು ಪಾದದ , ಒಟ್ಟು 76 ಅಕ್ಷರಗಳ ಶ್ಲೋಕವಿದು]
[Meter: Shardula Vikridita: 19 x 4 = 76 syllabic counts]

ವಿದ್ಯೆ ಎಷ್ಟು ದೊಡ್ಡ ಸಂಪತ್ತು ಎಂಬುದನ್ನು ಮತ್ತು ಇಂದು ನಾವೆಲ್ಲ ಮರೆತಿರುವ  ವಿದ್ಯೆಯ ಮಹತ್ವವನ್ನು
ಭರ್ತೃಹರಿ ನಮಗೆ ತಿಳಿಸಿಕೊಡುವ ಸುಂದರ ಶ್ಲೋಕವಿದು...

ಇಂದು ನಾವು ಸಂಪತ್ತಿಗಾಗಿ ವಿದ್ಯೆಯನ್ನು ಕಲಿಯುತ್ತಿದ್ದೇವೆ ಆದರೆ, ವಿದ್ಯೆಯೇ ಒಂದು ದೊಡ್ಡ ಸಂಪತ್ತು ಎಂಬುದನ್ನು ಮರೆತಿದ್ದೇವೆ....

ನಾವು ಗಳಿಸುವ ಹಣ ಅಥವಾ ಬಾಹ್ಯ ಸಂಪತ್ತನ್ನು ದೋಚಲಿಕ್ಕೆ ನಾನಾ ಬಗೆಯ ಜನರು ಮತ್ತು ದಾರಿಗಳಿವೆ, ಮಾರಾಟ ತೆರಿಗೆ, ಆದಾಯ ತೆರಿಗೆ, ಕಳ್ಳಕಾಕರು... ಹೀಗೆಲ್ಲ. ಆದರೆ ವಿದ್ಯೆಯನ್ನು ನಾವು ಸಂಪತ್ತಾಗಿ ಬಳಸಿದಾಗ, ಇದು ಯಾವ ಕಳ್ಳಕಾಕರ ಕಣ್ಣಿಗೂ ಬೀಳದ, ಯಾರೂ ಅಪಹರಿಸಲಾಗದ ಸಂಪತ್ತಾಗಿರುತ್ತದೆ... ಅಷ್ಟೇ ಅಲ್ಲ ವಿದ್ಯೆಯಿಂದ ಪಡೆಯುವ ಆನಂದ "ಕಿಮಪಿ ಶಂ" ಬೇರಾವುದರಿಂದಲೂ ಸಿಗುವುದಿಲ್ಲ... "ಶಂ" ಅಂದರೆ ಅಂತಃಸುಖ. ನಮ್ಮ ಓದಿನಿಂದ ಒಂದು ಅಪರೂಪದ ಸಂಗತಿ ತಿಳಿದಾಗ, ಅಥವಾ ಒಂದು ಹೊಸ ಅಪೂರ್ವ ಅರ್ಥ ಹೊಳೆದಾಗ ನಮ್ಮ  ಒಳಗಿನಿಂದ ಆಗುವ ಆನಂದ ಉಂಟಲ್ಲ , ಅದು ಹೊರಗಿನಿಂದ ನಾವು ಪಡೆಯುವ ಯಾವ ಆನಂದಕ್ಕೂ ಸಮವಲ್ಲ....
ನಮ್ಮ ಬಾಹ್ಯ ಪ್ರಪಂಚದ ಸುಖದಲ್ಲಿ ಅತ್ಯಂತ ಎತ್ತರದ ಸುಖ ಅನ್ನುವ ಸಂಗತಿಯನ್ನೂ ಮೀರಿದ್ದು ವಿದ್ಯೆಯಿಂದ ಬಂದ ಜ್ಞಾನವೆಂಬ ಸುಖ...

ಅದು ಹೇಳಲಿಕ್ಕಾಗದ ಖುಷಿ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುವ ಖುಷಿ... ಇಂಥಾ ಆನಂದವನ್ನು ಬಾಹ್ಯ ಪ್ರಪಂಚದ ಯಾವ ವಸ್ತುವೂ ಕೊಡುವುದಿಲ್ಲವಲ್ಲ...

"ಆರ್ತೋಜಿಜ್ಞಾಸುರರ್ಥಾರ್ಥಿ" ...  ಅಂದರೆ , ಹಣವೆಂಬುದು ನಾವು ಕಷ್ಟದಲ್ಲಿದ್ದವರಿಗೆ ಅಥವಾ ಹಣ ಬಯಸಿ ಬಂದವರಿಗೆ ಹಂಚಿದಷ್ಟೂ ನಮ್ಮಲ್ಲಿ ಕಡಿಮೆಯಾಗುವ ಸಂಪತ್ತು,...
ಆದರೆ ವಿದ್ಯೆ ಹಾಗಲ್ಲ , ಜಿಜ್ಞಾಸುಃ - ಅಂದರೆ ಜ್ಞಾನತೃಷೆಯಿಂದ, ವಿದ್ಯೆಯನ್ನು ಬಯಸಿ ಬಂದವರಿಗೆಲ್ಲ ವಿದ್ಯೆಯನ್ನು ನಿರಂತರ ದಾನ ಮಾಡಿದಷ್ಟೂ , ಹಂಚಿದಷ್ಟೂ... ಆ ಜ್ಞಾನ ನಮ್ಮಲ್ಲಿ ವೃದ್ಧಿಹೊಂದುತ್ತಾ ಹೋಗುತ್ತದೆ. ಅಂದರೆ ಇನ್ನೊಬ್ಬರಿಗೆ ಪಾಠ ಹೇಳಿದಷ್ಟೂ ಆ ಜ್ಞಾನ ನಮ್ಮಲ್ಲಿ ಗಟ್ಟಿಗೊಳ್ಳುತ್ತಾ ಹೋಗುತ್ತದೆ.... ಇದು ಎಷ್ಟು ವೃದ್ಧಿ ಹೊಂದುತ್ತದೆ ಅಂದರೆ... ಉದಾಹರಣೆಗೆ ಒಬ್ಬ ಗುರು ಶಿಷ್ಯನಿಗೆ ಪಾಠ ಹೇಳಿದ್ದು , ತಲೆಮಾರು-ತಲೆಮಾರುಗಳ ಆ ಶಿಷ್ಯಪರಂಪರೆಯಲ್ಲಿ ಮುಂದುವರೆದು ಶತ-ಶತಮಾನಗಳ ಆ ಪುಣ್ಯಫಲ  ಮೂಲ ಆಚಾರ್ಯ ಪುರುಷನಿಗೆ ಸಲ್ಲುತ್ತದೆ...

ಒಂದು ಪಕ್ಷ ವಿದ್ಯೆಯನ್ನು ಗ್ರಹಿಸುವವರು ಸಿಗದೆ ಹಂಚಲಿಕ್ಕಾಗಲಿಲ್ಲ ,  ಆಗ ಕೂಡ ನಾವು ಗಳಿಸಿದ ವಿದ್ಯೆ ಮುಂದಿನ ಜನ್ಮದಲ್ಲಿ ಪುನಃ ಮರಳಿಪಡೆದು ಬಳಸಲಿಕ್ಕೆ ಬರುತ್ತದೆ...

ಆದರೆ ಕೂಡಿಟ್ಟ ಧನ ಹಾಗಲ್ಲ , ಒಂದು ವೇಳೆ ಆ ಹಣ ಹಿಂದಿನ ಜನ್ಮದಲ್ಲಿ  ತಾನೇ ಸಂಪಾದಿಸಿದ್ದು ಎಂದು ಪೂರ್ವಜನ್ಮ ಸ್ಮರಣೆಯಿಂದ ತಿಳಿದು ಬಂದರೂ ಹಕ್ಕನ್ನು ಚಲಾಯಿಸುವ ಅಧಿಕಾರವಿರುವುದಿಲ್ಲ. ಇದು ಹಣಕ್ಕೂ ವಿದ್ಯೆಗೂ ಇರುವ ವ್ಯತ್ಯಾಸ ಮತ್ತು ವಿದ್ಯೆಗಿರುವ ಮಹತ್ವ..

ಎಷ್ಟು ಜನ್ಮ ಹೀಗೇ ವಿದ್ಯೆಯನ್ನು ಮರಳಿ ಪಡೆಯಬಹುದು ? ಎಂಬ ಪ್ರಶ್ನೆಗೆ - "ಕಲ್ಪಾಂತೇಷ್ವಪಿ ನ ಪ್ರಯಾತಿ ನಿಧನಂ" ಒಮ್ಮೆ ಗಳಿಸಿದ ವಿದ್ಯೆ ಅಥವಾ ಜ್ಞಾನ ಕಲ್ಪದ ಅಂತ್ಯದಲ್ಲಿಯೂ ನಾಶ ಹೊಂದುವುದಿಲ್ಲ ಅನ್ನುತ್ತಾನೆ ಭರ್ತೃಹರಿ.

ಜ್ಞಾನಕ್ಕೆ ಎಂದೂ ನಾಶ ಇಲ್ಲ... ಒಂದು ಜನ್ಮದಲ್ಲಿ ಗಳಿಸಿದ ಜ್ಞಾನ ಜನ್ಮಾಂತರಗಳಲ್ಲಿ ಮತ್ತೆ ಬೆಳೆಯುವುದೇ ಹೊರತು ಎಂದೂ ನಾಶ ಹೊಂದುವುದಿಲ್ಲ...

ಒಂದು ಕಲ್ಪಕಾಲ ಅಂದರೆ , "ಚತುರ್ಯುಗ ಸಹಸ್ರಾಂತೇ ಬ್ರಹ್ಮಣೋ ದಿನಮುಚ್ಯತೆ" .. ಅಂದರೆ, 4,32,000 ವರ್ಷಗಳು ಕಲಿಯುಗ, ಇದರ ಎರಡು ಪಟ್ಟು ದ್ವಾಪರ, ಮೂರು ಪಟ್ಟು ತ್ತ್ರೇತಾ, ನಾಲ್ಕು ಪಟ್ಟು ಕೃತ... ಹೀಗೆ ಒಟ್ಟಾಗಿ 43,20,000 ವರ್ಷಗಳು ಒಂದು ಚತುರ್ಯುಗ ವರ್ಷಗಳಾಗುತ್ತವೆ. ಇಂಥಹ 1000 ಚತುರ್ಯುಗ ವರ್ಷಗಳು ಕಳೆಯುವುದೇ ಬ್ರಹ್ಮನ ದಿನಕಲ್ಪ. ಅದೇ 432 ಕೋಟಿ ನಮ್ಮ ವರ್ಷಗಳ ಬ್ರಹ್ಮದೇವರ ಹಗಲು.. ಈ ಹಗಲು ಮುಗಿದು ರಾತ್ರಿಗೆ ಜಾರುವ ಕಾಲವೇ "ಕಲ್ಪಾಂತ್ಯ"...  ಮತ್ತೆ 432 ಕೋಟಿ ವರ್ಷಕಾಲ ಬ್ರಹ್ಮದೇವರ ರಾತ್ರಿಕಲ್ಪ.. ಈ ದೀರ್ಘನಿದ್ರೆಯಿಂದ ಮತ್ತೆ ಸೃಷ್ಟಿಗೆ ಹೊರಬಂದಾಗಲೂ ಒಂದು ಜೀವಕ್ಕೆ ಆ ಹಿಂದಿನ ಕಲ್ಪಾಂತ್ಯದವರೆಗೆ ಗಳಿಸಿದ ಜ್ಞಾನ ಮಾಸುವುದಿಲ್ಲ... ಇದು ದಿನಕಲ್ಪ... ಇದರಂತೆಯೇ ಮಹಾಕಲ್ಪ ಪ್ರಳಯದಲ್ಲೂ ಕೂಡ ಎಂಬುದು ಶಾಸ್ತ್ರಕಾರರ ಅಭಿಮತ...

"ಮಹಾಕಲ್ಪಕಾಲ" ಅಂದರೆ ಬ್ರಹ್ಮದೇವರ ಪೂರ್ಣಾಯುಷ್ಯ, ಅದೇ ಬ್ರಹ್ಮನ ನೂರು ವರ್ಷ.. ಅದನ್ನು ನಮ್ಮ ವರ್ಷದಲ್ಲಿ ಗಣನೆಮಾಡಿಗಾದ 31,104 ಸಾವಿರ ಕೋಟಿ ವರ್ಷಗಳಾಗುತ್ತವೆ
(31,104,000,00,00,000 ವರ್ಷಗಳು)
ಬ್ರಹ್ಮದೇವರ ಇಷ್ಟು ಕಾಲ ಮುಗಿದ ಮೇಲೆ ಮತ್ತೆ ಅಷ್ಟೇ ಕಾಲ ಪ್ರಳಯ... ಹಾಗಾದಾಗಲೂ ಮತ್ತೆ ಸೃಷ್ಟಿ ಶುರುವಾದಾಗ ಹಿಂದೆ ಗಳಿಸಿದ ಜ್ಞಾನ ಜಾಗೃತವಾಗುತ್ತದೆ... ಆದ್ದರಿಂದ ಜ್ಞಾನಕ್ಕೆ ಎಂದಿಗೂ ನಾಶವಿಲ್ಲ...

ಎರಡು ಮನ್ವಂತರಗಳ ನಡುವೆ ಸುಮಾರು 1500 ವರ್ಷಗಳ ಪ್ರಳಯಕಾಲದಲ್ಲಿ ಭಗವಂತ ಮತ್ಸ್ಯರೂಪದಿಂದ ಮುಂದಿನ ಮನ್ವಂತರದ ಮನು ಮತ್ತು ಹಿಂದಿನ ಮನ್ವಂತರದ ವೇದಜ್ಞರಾದ ಋಷಿಮುನಿಗಳನ್ನು ತನ್ನ ಮತ್ಸ್ಯರೂಪವೆಂಬ ಮೀನಿನಾಕಾರದ ದೋಣಿಯಲ್ಲಿ ಕೂಡಿಸಿಕೊಂಡು  ರಕ್ಷಿಸುತ್ತಾ ಮುಂದಿನ ಮನ್ವಂತರದ ಸೃಷ್ಟಿಯಲ್ಲಿನ ಜ್ಞಾನಪ್ರಸಾರಕ್ಕೆ ಅನುವು ಮಾಡಿಕೊಡುತ್ತಾನೆ ಹಾಗೆ ಭಗವಂತನಿಂದಲೇ ಜ್ಞಾನ ಎಂದೂ ಸುರಕ್ಷಿತ... ಆದ್ದರಿಂದ "ವಿದ್ಯಾಖ್ಯಮಂತರ್ಧನಂ" ವಿದ್ಯೆ ಒಳಗಿನ ಸಂಪತ್ತು...ನಮ್ಮ  ಆತ್ಮಾಭಿವೃದ್ಧಿಗೆ ಸಂಬಂಧಪಟ್ಟ ಮಹತ್ವದ ಸಂಪತ್ತು...

ಹೊರಗಿನ ಸಂಪತ್ತು ಹಾಗಲ್ಲ. ಬಾಹ್ಯ ಸಂಪತ್ತು ಅವಿವೇಕದ ಜೊತೆಗೇ ನಮ್ಮೊಟ್ಟಿಗೆ ಬರುವಂತದು... ಆದ್ದರಿಂದ ಅದು ನಮ್ಮ ಅಧಃಪಾತಕ್ಕೂ ಕಾರಣವಾಗಬಹುದು...

"ನ ಸಾಂಪರಾಯ ಪ್ರತಿಭಾತಿ ಬಾಲಂ|
ಪ್ರಮಾದ್ಯಂತಂ ವಿತ್ತ ಮೋಹೇನ ಮೂಢಂ||"

ಭಗವಂತ ಅಂಥ ಬಾಲಿಶ ಸ್ವಭಾವದ ಮಂದಿಗೆ ಸಿಕ್ಕುವುದಿಲ್ಲ... ಏಕೆಂದರೆ  ಶ್ರೀಮಂತಿಕೆಯಿಂದ ದುಡ್ಡಿನ ಮೋಹಕ್ಕೆ ಬಲಿಯಾಗಿ ದಾರಿ ತಪ್ಪಿದವರು ಭಗವಂತನ ಬಳಿಗೆ ಅರ್ಥಾತ್ ಜ್ಞಾನದ ದಾರಿಗೆ ಹೋಗಲಾರರು...

ಜ್ಞಾನದ ಸಂಪತ್ತಿಗೆ ಸಮಾನವಾದ  ಯಾವ ಸಂಪತ್ತೂ ಇಲ್ಲ ಎಂದು ಅರಿತವರು ಯಾರು ಇದ್ದಾರೆಯೋ ಅಂಥಹ  ಜ್ಞಾನಿಗಳ ಮುಂದೆ  "ಎಲೈ ರಾಜರೇ !! " ನಿಮ್ಮ ಶ್ರೀಮಂತಿಕೆಯ ಅಹಂಕಾರದಿಂದ, ಐಶ್ವರ್ಯದ ಮತ್ತು ದೇಶವನ್ನಾಳುವ ಅಧಿಕಾರದ ಗತ್ತನ್ನು  ತೋರಿಸಬೇಡಿ. ಜ್ಞಾನಿಗಳ ಮುಂದೆ ನಿಮ್ಮ ಸಂಪತ್ತಿಗೆ ಯಾವ ಕಾಸಿನ ಬೆಲೆಯೂ ಇಲ್ಲ..  ಏಕೆಂದರೆ  ಜ್ಞಾನಿಗಳ, ವಿದ್ವಾಂಸರ ಮುಂದೆ ಸ್ಪರ್ಧೆಗಿಳಿಯುವ ತಾಕತ್ತು ಯಾರಿಗೂ ಇರುವುದಿಲ್ಲ!  ವಿದ್ಯೆಯ ಸಂಪತ್ತು ಅಷ್ಟು ದೊಡ್ಡದು...
ಆದ್ದರಿಂದ ವಿದ್ವಾಂಸರನ್ನು, ಜ್ಞಾನಿಗಳನ್ನು  ಕಡೆಗಣಿಸದೆ ಗೌರವಿಸಿ...ಎಂದು ಬುದ್ಧಿವಾದ ಹೇಳುತ್ತಾನೆ ಭರ್ತೃಹರಿ...

ಮೂಲತಃ,  ಇಲ್ಲಿ ಭರ್ತೃಹರಿ ತಾನು ಹಿಂದೆ ಅನುಭವಿಸಿದ,  ಆ ಕಾಲದಲ್ಲಿದ್ದ , ಸಂಪತ್ತಿನ, ಶ್ರೀಮಂತಿಕೆಯ, ಅಧಿಕಾರದ ಅಹಂಕಾರದಿಂದ ಮೆರೆಯುತ್ತಿದ್ದ  ರಾಜರುಗಳಿಗೆ, ಶ್ರೀಮಂತರಿಗೆ ವಿದ್ವಾಂಸರ ಬಗೆಗೆ ಕೊಟ್ಟ ಎಚ್ಚರಿಕೆಯ ಮಾತುಗಳಿವು....
              🔹🔹🔹🔹

Tuesday, February 2, 2016

Neeti Shataka Shloka 11

ಶಾಸ್ತ್ರೋಪಸ್ಕೃತ ಶಬ್ದ ಸುಂದರಗಿರಃ ಶಿಷ್ಯಪ್ರದೇಯಾಗಮಾಃ
ವಿಖ್ಯಾತಾಃ ಕವಯೋ ವಸಂತಿ ವಿಷಯೇ ಯಸ್ಯ ಪ್ರಭೋರ್ನಿರ್ಧನಾಃ |
ತಜ್ಜಾಡ್ಯಂ ವಸುಧಾಧಿಪಸ್ಯ ಸುಧಿಯಸ್ತ್ವರ್ಥಂ ವಿನಾಪೀಶ್ವರಾಃ
ಕುತ್ಸ್ಯಾಃ ಸ್ಯುಃ ಕುಪರೀಕ್ಷೈರ್ನ ಮಣಯೋ ಯೈರರ್ಘತಃ ಪಾತಿತಾಃ ||11||

शास्त्रोपस्कृत शब्द सुन्दरगिरः शिष्यप्रदेयागमाः
विख्याताः कवयो वसंति विषये यस्य प्रभोर्निर्धनाः|
तज्जाड्यं वसुधाधिपस्य सुधियस्त्वर्थं विनापीश्वराः
कुत्स्याःस्युः कुपरीक्षैर्न मणयो यैरर्घतः पातिताः||11||

śāstrōpaskr̥ta śabda sundaragiraḥ śiṣyapradēyāgamāḥ
vikhyātāḥ kavayō vasanti viṣayē yasya prabhōnirdhanāḥ |
tajjāḍyaṁ vasudhādhipasya sudhiyastvarthaṁ vināpīśvarāḥ
kutsyāḥsyuḥ kuparīkṣairna maṇayō yairarghataḥ pātitāḥ ||11||

ಛಂದಸ್ಸು: ಈ ಪದ್ಯ ಶಾರ್ದೂಲವಿಕ್ರೀಡಿತಾ ವೃತ್ತದಲ್ಲಿದೆ...(೧೯ಅಕ್ಷರಗಳ ೪ ಸಾಲುಗಳಿಂದಾದ ಒಟ್ಟು ೭೬ ಅಕ್ಷರಗಳ ಛಂದಸ್ಸಿದು)

Meter: This verse is in the śardūlavikrīditā meter (19 syllables per quarter, 4 quarters, total 76 syllables).

ಭರ್ತೃಹರಿ ಈತನಕದ ಹತ್ತು ಶ್ಲೋಕಗಳಲ್ಲಿ ಮೂರ್ಖರು ಹೇಗೆ ಇರುತ್ತಾರೆ, ಅವರ ಸ್ವರೂಪ ಎಂಥದು ಎಂಬುದನ್ನು ವರ್ಣಿಸಿದ.  ಇಲ್ಲಿಂದ ಮುಂದೆ ಸಮಾಜದಲ್ಲಿನ ವಿದ್ವಜ್ಜನರ ಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿಸಿಕೊಡುತ್ತಾನೆ...

ವಿದ್ವಾಂಸರಾದವರು ಎಂದೂ ಉಡಾಫೆಯ ಮಾತುಗಳನ್ನಾಡುವುದಿಲ್ಲ. ತಾವು ಆಡುವ ಪ್ರತಿಯೊಂದು ಮಾತಿಗೆ ಶಾಸ್ತ್ರದ ಆಧಾರ ಕೊಟ್ಟು ಮಾತನಾಡುತ್ತಾರೆ. (ತದುಕ್ತಂ ಬ್ರಹ್ಮಾಂಡೆ, ತದುಕ್ತಂ ಸ್ಕಾಂದೆ... ಹೀಗೆ) ಆದ್ದರಿಂದ ಅವರಾಡುವ ಒಂದೊಂದು ಶಬ್ದವೂ, ವಾಕ್ಯವೂ ಶಾಸ್ತ್ರಗಳ ಹಿನ್ನೆಲೆಯಿಂದ ಪರಿಷ್ಕಾರಗೊಂಡದ್ದು ಮತ್ತು ಪ್ರತಿಯೊಂದು ಮಾತೂ ಶಾಸ್ತ್ರದ ಪುರಸ್ಕಾರದಿಂದ ಅಲಂಕಾರಗೊಂಡದ್ದಾಗಿರುತ್ತದೆ. ಅವರ ಮಾತಿನ ಮೋಡಿ, ಶಬ್ದಗಳ ಆಯ್ಕೆ , ಕೇಳುವುದಕ್ಕೆ ಮಧುರವಾಗಿದ್ದು ಆಡು ಭಾಷೆಗೆ ಒಗ್ಗುವ ನಡೆಯಲ್ಲಿ ಮಾತನಾಡುತ್ತಾರೆ... ಭಾಷೆಯ ಬನಿಯನ್ನು (ಭಾಷೆಯ ಗುಟ್ಟನ್ನು) ಅರಿತು ಸ್ವಚ್ಛವಾಗಿ ಮಾತನಾಡುವುದರಿಂದ ಅವರಾಡುವ ಮಾತು ಕೇಳುವುದಕ್ಕೆ ಇಂಪಾಗಿದ್ದು , ಮಧುರವಾಗಿದ್ದು , ಕೇಳಿದವರಿಗೆ ಸಹಜವಾಗಿ ಅರ್ಥವಾಗುತ್ತದೆ.  ಅಂಥಹ ವಿಂದ್ವಾಸರು ಮಾತ್ರ ತಮ್ಮ ಶಿಷ್ಯರಿಗೆ ಆಗಮವನ್ನು ದಾನಮಾಡಬಲ್ಲರು.. ಅರ್ಥಾತ್, ಶಾಸ್ತ್ರದಲ್ಲಿ ಹೇಳಿದ್ದನ್ನು ಶಿಷ್ಯರಿಗೆ ಅರ್ಥವಾಗುವಂತೆ ಪಾಠ, ಪ್ರವಚನ ಮಾಡಬಲ್ಲರು...

ಆದರೆ  ತಿಳಿದುಕೊಂಡವರಿಗೆಲ್ಲ ಇನ್ನೊಬ್ಬರಿಗೆ ತಿಳಿಹೇಳುವ ಶಕ್ತಿ ಇರಬೇಕಾಗಿಲ್ಲ.  ಅದು ಬೇರೆಯೇ ಕಲೆ... ತಿಳಿದುಕೊಳ್ಳುವುದು ಒಂದು ಕಲೆಯಾದರೆ, ತಿಳಿದುಕೊಂಡದ್ದನ್ನು ಇನ್ನೊಬ್ಬರಿಗೆ ತಿಳಿಹೇಳುವುದು ಮತ್ತೊಂದು ಕಲೆ...  ತಿಳಿದವರಿಗೆಲ್ಲ ಪ್ರವಚನ ಮಾಡಿ ಇನ್ನೊಬ್ಬರಿಗೆ ತಿಳಿಸಿಕೊಡುವುದಕ್ಕೆ ಬರುವುದಿಲ್ಲ . ಸಮಾಜದಲ್ಲಿ ಅಂತಹ ಪಂಡಿತರು ಬೇಕಾದಷ್ಟು ಮಂದಿ ಇರುತ್ತಾರೆ ಅನ್ನುತ್ತಾನೆ ಭರ್ತೃಹರಿ. 

ಭಾರವಿಯ ಒಂದು ದೊಡ್ಡ ಮಾತು ಹೀಗಿದೆ :- " ಭವಂತಿ ತೇ ಸಭ್ಯತಮಾಃ ವಿಪಶ್ಚಿತಾನ್ ಮನೋರಥಂ ವಾಚಿ ನಿವೇಶಯಂತಿ" ಎಂದು. ಅಂದರೆ,

"ಯಾರಾದರೂ ತಮ್ಮ ಮನಸ್ಸಿನಲ್ಲಿದ್ದುದನ್ನು ತಿಳಿಯಾದ ಮಾತಿನಿಂದ ಇನ್ನೊಬ್ಬರಿಗೆ ಮುಟ್ಟಿಸಬಲ್ಲವರಾದರೆ, ಅವರೊಬ್ಬ ದೊಡ್ಡ ಕಲೆಗಾರರು.. ಅದೊಂದು ದೊಡ್ಡ ಕಲೆಗಾರಿಕೆ" ಅನ್ನುತ್ತಾನೆ ಪುರಾತನ ಕವಿ "ಭಾರವಿ".... ಆದ್ದರಿಂದ ಮಾತುಗಾರಿಕೆ ಎನ್ನುವುದು ಬೇರೆಯೇ ಕಲೆ...

ಇಂಥಹ ವಿಖ್ಯಾತರಾದ ವಿದ್ವಾಂಸರು ಯಾವ ರಾಜನ ರಾಜ್ಯದಲ್ಲಿ ಬಡವರಾಗಿ ಬದುಕುತ್ತಾರೋ, ಹಣವಿಲ್ಲದೆ ಒದ್ದಾಡುತ್ತಿರುತ್ತಾರೋ , ಅದು ಮೂರ್ಖರು ಆಳುವ ರಾಜ್ಯ ಅಥವಾ ದೇಶ... ಅದು ಆ ದೇಶದ ಅಥವಾ ಆ ರಾಜ್ಯದ ರಾಜನ ಮೂರ್ಖತನವನ್ನು , ಜಾಡ್ಯತನವನ್ನು ಪ್ರದರ್ಶಿಸುತ್ತದೆ...

ಭರ್ತೃಹರಿಯ ಈ ಶ್ಲೋಕವನ್ನು ನಾವಿರುವ ಈ ಕಾಲಘಟ್ಟಕ್ಕೆ ಹೋಲಿಸುವುದಾದರೆ, ಯಾವ ರಾಜ್ಯದಲ್ಲಿ , ಯಾವ ಆಡಳಿತದವು , ಆ ರಾಜ್ಯದ ದೊಡ್ಡ ವಿದ್ವಾಂಸರನ್ನು ಗುರುತಿಸದೆಒಬ್ಬನನ್ನು ಕೇವಲ ಯಾವ ಜಾತಿ, ಯಾವ ಪಂಗಡ, ಅನ್ನುವ ಜಾತಿವಾರು ವಿಭಾಗ ಮಾಡಿಕೊಂಡು ಹಣವನ್ನು ಹಂಚಿ, ಬಡತನದಿಂದ ಬದುಕುತ್ತಿರುವ ನಿಜವಾದ ವಿದ್ವಾಂಸರನ್ನು ದೂರ ಇಡುತ್ತಾನೋ, ಅದು ಅಂಥಹ ರಾಜ್ಯಾಡಳಿತದ ಮತ್ತು ಆ ರಾಜ್ಯದ ಮುಖ್ಯಮಂತ್ರಿಯ ಜಾಡ್ಯ ಮತ್ತು ಮೂರ್ಖತನವನ್ನು ಎತ್ತಿ ತೋರಿಸುತ್ತದೆ...

ಆದರೆ, ಅದರಿಂದ ನಷ್ಟ ಆ ದೇಶಕ್ಕೆ ಅಥವಾ ರಾಜ್ಯಕ್ಕೇ ಹೊರತು ಆ ವಿದ್ವಾಂಸನಿಗಲ್ಲ.. ಅನ್ಯಾಯ ಮಾಡಿದ ರಾಜ ಮೂರ್ಖನಾದ ಅಷ್ಟೇ. ಏಕೆಂದರೆ ದುಡ್ಡಿಲ್ಲದೆಯೂ ಜ್ಞಾನಿಗಳು ಎಂದೂ ಶ್ರೀಮಂತರೆ. ಅವರು ಯಾರಿಗೂ ಹೆದರದೆ, ದುಡ್ಡಿನ ಹಂಗಿಲ್ಲದೇ ಬದುಕಲು ಸರ್ವಸಮರ್ಥರು, ಪೂಜನೀಯರಾಗೇ ಬದುಕುವವರು...

ಭರ್ತೃಹರಿ ಒಂದು ಸುಂದರ ದೃಷ್ಟಾಂತದ ಮೂಲಕ ವಿದ್ವಾಂಸರ ಎತ್ತರವನ್ನು , ಗೌರವವನ್ನು ಎತ್ತಿ ಹಿಡಿಯುತ್ತಾನೆ...
ಪಂಡಿತರು ಎಂದರೆ, ಸ್ವಯಂ ಪ್ರಭೆ ಇರುವಂಥ ಒಂದು ವಜ್ರದ ಮಣಿಯಂತೆ... ಅಂಥಹ ಒಂದು ಮಣಿಯಿದೆ, ತುಂಬ ಬೆಲೆಬಾಳುವ ಮಣಿ ಅದು. ಆ ಮಣಿಯನ್ನು ಪರೀಕ್ಷಿಸಲು ಗೊತ್ತೇ ಇಲ್ಲದ ಪರೀಕ್ಷಕನಿಂದ, ಮಣಿಗೆ   ಕಡಿಮೆಬೆಲೆ ಕಟ್ಟಿದ ಮಾತ್ರಕ್ಕೆ , ಮಣಿ ತನಗಿರುವ ಮಹತ್ವವನ್ನು ಕಳೆದು ಕೊಂಡೀತೇ ?... ಎಂದೂ ಕಳೆದುಕೊಳ್ಳುವುದಿಲ್ಲ...

ಬೆಲೆ ಕಡಿಮೆ ಎಂಬ ನಿರ್ಣಯವಾಗಿದ್ದು ಮಣಿಯ ದೋಷವಲ್ಲ, ಬದಲಾಗಿ ಅದು ಕೆಟ್ಟ ಪರೀಕ್ಷಕನ ದೋಷ...
ಇದು ಕೇವಲ ಒಬ್ಬ ರಾಜನಿಗೆ ಮಾತ್ರ ಅನ್ವಯಿಸುವುದಷ್ಟೇ ಅಲ್ಲ , ಸಮಾಜದಲ್ಲಿ ಒಬ್ಬ ವಿದ್ವಾಂಸನನ್ನು, ಜ್ಞಾನಿಯನ್ನು  ಗುರುತಿಸದೆ ಇರುವ ಸಮಾಜದ ಜನಸಾಮಾನ್ಯರಿಗೂ ಅನ್ವಯವಾಗುವಂತದು...ಆಗ ಸಮಾಜ ಕೂಡ ಅಂಥಹ ವಿದ್ವಾಂಸನ ಜ್ಞಾನದಿಂದ ವಂಚಿತವಾಗುವಂತಾಗುತ್ತದೆ... ಹಾಗಾಗಿ ವಿದ್ವಾಂಸರನ್ನು ಕಡೆಗಾಣಿಸದೆ ಗೌರವಿಸಬೇಕಾದದ್ದು ಸಮಾಜದ ಕರ್ತವ್ಯವೂ ಆಗಿದೆ ಎಂಬುದು ಭರ್ತೃಹರಿಯ ಅಂತರಂಗದ ಅರ್ಥ ಕೂಡಾ ಹೌದು.

ಈ ಸಂದರ್ಭೋಚಿತ ಒಂದು ಗಾದೆ ಮಾತು ಕನ್ನಡದಲ್ಲಿ ಹೀಗೆ ಬಂದಿದೆ :

"ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ? ಎಂಬ ಗಾದೆ ಮಾತಿನಂತೆ...ವಿದ್ವಾಂಸರ ಮತ್ತು ವಿದ್ಯೆಯ ಹಿರಿಮೆಯನ್ನೇನು ಬಲ್ಲರು ಗುರುತಿಸಲಾಗದ ಅವಿವೇಕಿಗಳು)
🔹🔹🔹

Friday, January 29, 2016

Neeti Shataka 10

ಶಕ್ಯೋ ವಾರಯಿತುಂ ಜಲೇನ ಹುತಭುಕ್ ಶೂರ್ಪೇಣ ಸೂರ್ಯಾತಪೋ ನಾಗೇಂದ್ರೋ ನಿಶಿತಾಂಕುಶೇನ ಸಮದೋ ದಂಡೇನ ಗೌಗರ್ಧಭಃ |
ವ್ಯಾಧಿರ್ಭೇಷಜಸಂಗ್ರಹೈಶ್ಚ ವಿವಿಧೈರ್ಮಂತ್ರಪ್ರಯೋಗೈರ್ವಿಷಂ ಸರ್ವಸ್ಯೌಷಧಮಸ್ತಿ ಶಾಸ್ತ್ರವಿಹಿತಂ ಮೂರ್ಖಸ್ಯ ನಾಸ್ತ್ಯೌಷಧಮ್ ||10||

शक्यो वारयितुं जलेन हुतभुक् शूर्पेण सूर्यातपो नागेन्द्रो निशितांकुशेन समदो दंडेन गौगर्धभः|
व्याधिर्भेषजसङ्ग्रहैश्च विविधैर्मन्त्रप्रयोगैर्विषं सर्वस्यौषधमस्ति शास्त्रविहितं मूर्खस्य नास्त्यौषधम् ||10||

śakyō vārayituṁ jalēna hutabhuk śūrpēṇa sūryātapō nāgēndrō niśitāṅkuśēna samadō daṇḍēna gaugardhabhah |
vyādhirbhēṣajasaṅgrahaiśca vividhairmantraprayōgairviṣaṁ sarvasyauṣadhamasti śāstravihitaṁ mūrkhasya nāstyauṣadham ||10||

ಮೂರ್ಖತ್ವ ನಿವಾರಣೆಗೆ ಯಾವ ಮದ್ದೂ ಇಲ್ಲ ಅನ್ನುವ ಅಭಿಪ್ರಾಯವನ್ನು ಭರ್ತೃಹರಿ ವ್ಯಕ್ತಪಡಿಸಿದ ಸುಂದರ ಶ್ಲೋಕವಿದು...
ಒಂದು ವೇಳೆ ಒಂದು ಮನೆಗೇ ಬೆಂಕಿ ಬಿದ್ದರೂ ನೀರಿನಿಂದ ಆ ಬೆಂಕಿಯನ್ನು ಉಪಶಮನ ಮಾಡಬಹುದು... ಅಗ್ನಿಪ್ರಕೋಪಕ್ಕೆ ಮದ್ದು ಉಂಟು..
ತಡೆಯಲಿಕ್ಕಾಗದ ಬಿಸಿಲಿನ ಬೇಗೆಗೆ ಕೊಡೆ ಹಿಡಿಯುವುದರಿಂದ ಸೂರ್ಯನ ಬಿಸಿಲಿನ ತಾಪವನ್ನು ನಿವಾರಿಸಿಕೊಳ್ಳಬಹುದು. ಹೀಗೆ ಬಿಸಿಲಿನ ಬೇಗೆಗೂ ಮದ್ದು ಉಂಟು..
ಇಲ್ಲಿ ಭರ್ತೃಹರಿ ಕೊಡೆಗೆ "ಶೂರ್ಪ" ಅನ್ನುವ ಶಬ್ದ ಪ್ರಯೋಗ ಮಾಡಿದ್ದಾನೆ, ಆದರೆ ಸಂಸ್ಕೃತದಲ್ಲಿ ಶೂರ್ಪಕ್ಕೆ ಕೊಡೆ ಅನ್ನುವ ಅರ್ಥ ಕೂಡುವುದಿಲ್ಲ.. ಶೂರ್ಪ ಅಂದರೆ ಅಕ್ಕಿಗೇರುವ ಗೆರಸೆ ಅಥವಾ ಮೊರ ಅಂತ ಅರ್ಥ..
ಸಂಸ್ಕೃತದಲ್ಲಿ (ಛತ್ರಿಗೆ) ಕೊಡೆಗೆ  "ಆತಪತ್ರ" ಅಂತ ಹೆಸರು... ಹಿಂದೆ ರಾಜರು ನಡೆದು ಹೋಗುವಾಗ ಬಿಸಿಲು ಬೀಳದಂತೆ ದೂತರು ಕೊಡೆ ಹಿಡಿಯುತ್ತಿದ್ದರು.. ಈ ಶಬ್ದಗಳು ಬಂದದ್ದು ಅರಸೊತ್ತಿಗೆಯಿಂದ.. ಆತತ ಪತ್ರ ಅಂದರೆ ಆತಪದಿಂದ (ಬಿಸಿಲಿನಿಂದ) ರಕ್ಷಣೆ ನೀಡುವಂತದು... ಹಿಂದೆ ತಾಡೀವಲೆಯಿಂದ ಆತಪತ್ರವನ್ನು ತಯಾರಿಸುತ್ತಿದ್ದರು, ಬಟ್ಟೆಯಿಂದಲ್ಲ.  ಬಿಡಿಸಿದಾಗ ಛತ್ರಿಯಂತೆ ಅಗಲವಾಗುವಂತದು ಆತಪತ್ರ...
ಇಂದು ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ದೇವರ ಪ್ರತಿಮೆಯ ಉತ್ಸವ ಹೋಗುವಾಗ ದೇವರ ಪ್ರತಿಮೆಗೆ ಬಿಸಿಲು ಬೀಳದಂತೆ ಈ ರೀತಿಯ ಕೊಡೆ ಹಿಡಿಯುತ್ತಾರೆ...

ಮದವೇರಿದ ಆನೆ ಕೂಡ, ನಿಶಿತವಾದ (ಚೂಪಾದ) ಅಂಕುಶದಿಂದ ಅದರ ಕಿವಿಯ ಹಿಂಭಾಗದ ಮರ್ಮಸ್ಥಾನಕ್ಕೆ ತಿವಿದಾಗ, ಅತಿಯಾದ ವೇದನೆಯಿಂದಾಗಿ ಮಾವುತನ ನಿಯಂತ್ರಣಕ್ಕೆ ಬಂದು ಬಿಡುತ್ತದೆ..
ವರಾಹ ಅವತಾರದಲ್ಲಿ ಭಗವಂತ ಕೂಡ ಆದಿದೈತ್ಯನನ್ನು ಕೊಂದದ್ದು  "ಕರ್ಣತಾಡನಾತ್" ಕಿವಿಗೆ ಹೊಡೆಯುವುದರಿಂದಲೆ.. ಸಾಮಾನ್ಯವಾಗಿ ಎಲ್ಲ ಪ್ರಾಣಿಗಳಲ್ಲಿ ಕಿವಿಯ ಹಿಂಭಾಗ ಅತಿವೇದನೆ ತರಿಸುವಂತಹ ಮರ್ಮಸ್ಥಾನವಾಗಿರುತ್ತದೆ...  
ಹೀಗೆ ಮತ್ತೇರಿದ ಆನೆಯನ್ನಾದರೂ ಬೆತ್ತ ಮತ್ತು ಅಂಕುಶದಿಂದ ನಿಯಂತ್ರಿಸಬಹುದು...
ಹಸು - ಕತ್ತೆಗಳಂತ ಸಾಕು ಪ್ರಾಣಿಗಳು ಮಾತು ಕೇಳದೆ ತಿರುಗಿ ಬಿದ್ದಾಗ ಅಥವಾ ನಮ್ಮನ್ನು ಅಟ್ಟಿಸಿಕೊಂಡು ಬಂದಾಗ ದಂಡ ಪ್ರಯೋಗದಿಂದ ಅವುಗಳನ್ನು ನಿಯಂತ್ರಿಸಬಹುದು...
ಯಾವುದೇ ವ್ಯಾಧಿ ಅಥವಾ ಕಾಯಿಲೆಳಿಗೆ ಶಾಸ್ತ್ರವಿಹಿತವಾದ ಔಷಧಗಳಿವೆ ಅವುಗಳ ಸಂಗ್ರಹ ಮತ್ತು ಉಪಚಾರಗಳಿಂದ ಎಂಥ ರೋಗವನ್ನೂ ಗುಣಪಡಿಸಿಕೊಳ್ಳಬಹುದು...
ಯಾರೋ ಒಬ್ಬನಿಗೆ ಹಾವು ಕಚ್ಚಿ ದೇಹದಲ್ಲಿ ವಿಷ ಏರಿತು ಅಥವಾ ಯಾರೋ ಒಬ್ಬ ವಿಷ ಕುಡಿದ, ಇದಕ್ಕೂ ಶಾಸ್ತ್ರದಲ್ಲಿ ಹೇಳಿರುವ ಮಾಂತ್ರಿಕ ವಿಧಾನ, ತಾಂತ್ರಿಕ ವಿಧಾನಗಳಿವೆ... ಅವುಗಳ ಪ್ರಯೋಗದಿಂದ ವಿಷವನ್ನೂ ದೇಹದಿಂದ ಹೊರತೆಗೆದು ವಿಷಮುಕ್ತರಾಗಬಹುದು...
ಹೀಗೆ ಶಾಸ್ತ್ರದಲ್ಲಿ ಪ್ರತಿಯೊಂದು ಕಾಯಿಲೆಗೂ ಅಥವಾ ಯಾವುದೇ ತೊಂದರೆ ಅಥವಾ ಸಮಸ್ಯೆಗಳಿಗೂ ಪರಿಹಾರವಿದೆ, ಔಷಧವಿದೆ ಅಂತ ಹೇಳಿದ್ದಾರೆ ಆದರೆ ಮೂರ್ಖತನಕ್ಕೆ , ಮೂರ್ಖರಿಗೆ ಯಾವ ಮದ್ದೂ ಹೇಳಲಿಲ್ಲ...  "ಮೂರ್ಖಸ್ಯ ನಾಸ್ತ್ಯೌಷಧಮ್" ಆದ್ದರಿಂದ ಮೂರ್ಖನಿಗೆ ಔಷಧವೇ ಇಲ್ಲ.... ಅಂದರೆ ಮಂಕುತನಕ್ಕೆ ಮದ್ದಿಲ್ಲ ..
****

Tuesday, January 19, 2016

Neeti Shataka Shloka 09

ಶಿರಃ ಶಾರ್ವಂ ಸ್ವರ್ಗಾತ್ಪಶುಪತಿ ಶಿರಸ್ತಃ ಕ್ಷಿತಿಧರಂ
ಮಹೀಧ್ರಾದುತ್ತುಂಗಾದವನಿಮವನೇಶ್ಚಾಪಿ ಜಲಧಿಮ್ |
ಅಧೋ ಗಂಗಾ ಸೇಯಂ ಪದಮುಪಗತಾ ಸ್ತೋಕಮಥವಾ
ವಿವೇಕಭ್ರಷ್ಟಾನಾಂ ಭವತಿ ವಿನಿಪಾತಃ ಶತಮುಖಃ || 9 ||

शिरः शार्वं स्वर्गात्पशुपति शिरस्तः क्षितिधरं
महीध्रादुत्तुङ्गादवनिमवनेश्चापि जलधिम्|
धो गंगा सेयं पदमुपगता स्तोकमथवा
विवेकभ्रष्टानां भवति विनिपातः शतमुखः|| 9 ||

śira śārva svargātpaśupati śirasta kitidhara
mahīdhrāduttugādavanimavanēścāpi jaladhim |
adhō gagā sēya padamupagatā stōkamathavā
vivēkabhraṣṭānā bhavati vinipāta śatamukha ||9 ||

ಸ್ವರ್ಗಲೋಕದಿಂದ ಕೆಳಗಿಳಿದ ಗಂಗೆ, ಶಿವನ ತಲೆಗೆ ಬಂದು ಬಿದ್ದಿತು, ಇದು ಒಂದು ಅಧಃಪಾತ. ಅಲ್ಲಿಂದ ಹಿಮಾಲಯ ಪರ್ವತದ ಮೇಲೆ ಬಿದ್ದಿತು, ಹಿಮಾಲಯ ಭೂಮಿಯ ಮೇಲಿನ ಎತ್ತರದ ಭಾಗ, ಆ ಹಿಮಾಲಯ ಪರ್ವತಗಳ ಶ್ರೇಣಿಯಿಂದ ಅನೇಕ ಕವಲುಗಳಾಗಿ ಹರಿದ ಗಂಗೆ ಧರೆಗಿಳಿದು ಮತ್ತಷ್ಟು ಅಧಃಪಾತ ಹೊಂದಿ, ಭೂಮಿಯಲ್ಲಿ ಹರಿಯುತ್ತಾ ಕೊನೆಗೆ ಸಮುದ್ರ ಸೇರಿತು... ಹೀಗೆಯೇ ಮೂರ್ಖರ ಅಧಃಪತನ ಅನ್ನುತ್ತಾನೆ ಭರ್ತೃಹರಿ.

ಈ ಶ್ಲೋಕದಲ್ಲಿ ಭರ್ತೃಹರಿ ಗಂಗಾ ನದಿಯನ್ನು ಮೂರ್ಖರ ಅಧಃಪಾತದ ಲಕ್ಷಣಕ್ಕೆ ದೃಷ್ಟಾಂತವಾಗಿ ಕೊಟ್ಟದ್ದು ಅಷ್ಟು ಸಮಂಜಸವಾಗಿಲ್ಲ... ಕಾವ್ಯದ ದೃಷ್ಟಿಯಿಂದಲೂ ಅಷ್ಟು ಒಳ್ಳೆಯ ದೃಷ್ಟಾಂತವಲ್ಲ , ಎಂಬುದು ಆಚಾರ್ಯರ ಅಭಿಪ್ರಾಯ....

ಏಕೆಂದರೆ, ಗಂಗೆಯನ್ನು "ಸ್ವರ್ಗಂಗಾ" ಅಂತ ಕರೆಯುತ್ತಾರೆ... ದೇವಲೋಕದ ಗಂಗಾನದಿ ಸ್ವರ್ಗದಿಂದ ಕೆಳಕ್ಕೆ ಬಿದ್ದಿತು, ಅಂದರೆ ಶಿವನ ಶಿರಸ್ಸಿಗೆ ಬಂದು ಬಿದ್ದಿತು. ಅಧಃಪಾತ ಅಂದರೆ ಕೆಟ್ಟ ಜಾಗಕ್ಕೆ ಬೀಳುವುದು ಅಂತ ಅರ್ಥ. ಸ್ವರ್ಗದಿಂದ ಶಿವನ ಶಿರಸ್ಸುನ್ನು ಸೇರಿದ ಗಂಗೆಯನ್ನು ಅಧಃಪತನ ಅಂತ ಕರೆಯುವುದು ಹೇಗೆ ?   ಆದರೆ, ಬೇಂದ್ರೆಯವರು ಇದಕ್ಕೊಂದು ನಿಜವಾದ ಅರ್ಥಕೊಟ್ಟರು... ಅವರು ಹೇಳಿದರು ಅದು ಗಂಗೆಯ ಅಧಃಪತನವಲ್ಲ , "ಅವತರಣ" ಅಂತ... ಸ್ವರ್ಗಲೋಕದ ಗಂಗೆ ನಮ್ಮನ್ನು ಪಾವನಗೊಳಿಸಲು ಈ ಲೋಕಕ್ಕೆ ಇಳಿದು ಬಂದವಳು... ಆದ್ದರಿಂದ ಬೇಂದ್ರೆಯವರ ದೃಷ್ಟಿಯಲ್ಲಿ ಇದು "ಗಂಗಾವತರಣ"ವಾಯಿತು...

ಭರ್ತೃಹರಿಯ ದೃಷ್ಟಿಯಲ್ಲಿ , ಗಂಗೆ ಸ್ವರ್ಗದಿಂದ ಕೆಳಗೆ ಇಳಿಯುತ್ತಾ ಅಧಃಪಾತ ಹೊಂದುತ್ತಾ ಹೊಂದುತ್ತಾ , ಮಹತ್ತಾಗಿದ್ದದ್ದನ್ನು ಕಳೆದುಕೊಂಡು ಅಲ್ಪತ್ವವನ್ನು ಪಡೆದು, ದೊಡ್ಡ ಗಾತ್ರದಿಂದ ಸಂಕುಚಿತ ಗಾತ್ರ ಪಡೆದು ಅಧಃಪಾತ ಹೊಂದಿದಂತೆ,  "ಯಾರು ವಿವೇಕವಿಲ್ಲದೆ ಬದುಕುತ್ತಾರೆಯೋ, ಅವರು ಜೀವನದಲ್ಲಿ ಜಾರುತ್ತಾ ಜಾರುತ್ತಾ ಅಧಃಪಾತ ಹೊಂದುತ್ತಾರೆ. ಅವರೆಂದೂ ಎತ್ತರಕ್ಕೆ ಏರುವುದಿಲ್ಲ ಎಂಬುದು ಭರ್ತೃಹರಿಯ ಸಂದೇಶ"... 

ಆಚಾರ್ಯರ ಅಭಿಪ್ರಾಯದಂತೆ ಕೇವಲ ಕೊನೆಯ ಸಾಲನ್ನು ಮಾತ್ರ ಅಂದರೆ, ಭರ್ತೃಹರಿಯ ಸಂದೇಶವನ್ನು ಮಾತ್ರ ತೆಗೆದುಕೊಂಡು, ಗಂಗೆಯ ಅಧಃಪಾತವನ್ನು ಮರೆಯುವುದು ಒಳಿತು.... 

ಗಂಗೆಗೆ ವಿವೇಕದ ಪ್ರಶ್ನೆ ಬರುವುದಿಲ್ಲ ಏಕೆಂದರೆ ಅದು ನೀರು, ಕೇವಲ ಜಡ. ತಗ್ಗಿದ್ದಲ್ಲಿ ಕೆಳಕ್ಕೆ ಜಾರುವುದು, ಜಾರುತ್ತಾ ಹರಿಯುವುದು ನೀರಿನ ಸಹಜ ಗುಣ... 

ಆದರೆ, ಗಂಗೆ ಇಳಿದು ಬಂದದ್ದೇ ಭಗೀರಥನ ಹಿರಿಯರ ಉದ್ಧಾರಕ್ಕೋಸ್ಕರ. ಅದರಿಂದ ಸಗರನ  60,000 ಪುತ್ರರು ಸದ್ಗತಿ ಪಡೆದರು. ಈ ದೃಷ್ಟಿಯಿಂದ ಮೂರ್ಖತ್ವದ ಅಧಃಪತನಕ್ಕೆ ಎಂದೂ ಗಂಗೆ ದೃಷ್ಟಾಂತವಾಗಲಾರಳು....


ಆದರೆ ಇಂದು ನಾವು ಗಂಗೆಯನ್ನು ಪವಿತ್ರವಾಗಿ ಉಳಿಸಿಕೊಂಡಿಲ್ಲ.... ಗಂಗೆಯಲ್ಲಿ ನಾವು ಎಲ್ಲ ಹೊಲಸನ್ನೂ ಹರಿಯಬಿಟ್ಟು , ಗಂಗಾಜಲ ಸ್ನಾನಕ್ಕೆ ಕೂಡ ಯೋಗ್ಯವಾಗದ ಸ್ಥಿತಿಯನ್ನು ತಲುಪಿದೆ. ಇದನ್ನು ಗಮನಿಸಿದರೆ ಹಿಂದೆ ದ್ವಾಪರದಲ್ಲಿ ವೇದವ್ಯಾಸರು ಆಡಿದ ಮಾತು ನೆನಪಾಗುತ್ತದೆ, ಅವರು ಅಂದೇ ಹೇಳಿದರು: "ಗಂಗೆ ದ್ವಾಪರಾಂತ್ಯದ 5000 ವರ್ಷಗಳ ನಂತರ ಭೂಮಿಯಲ್ಲಿ ಇರುವುದಿಲ್ಲ... ಅವಳು ಪುನಃ ದೇವಲೋಕಕ್ಕೆ ಹೊರಟು ಹೋಗುತ್ತಾಳೆ" ಅನ್ನುವ ಮಾತು.  ಈಗಿನ ಗಂಗೆಯ ಸ್ಥಿತಿ ನೋಡಿದರೆ, ವೇದವ್ಯಾಸರ ವಾಣಿ ನಿಜವಾಗುತ್ತಿದೆಯೇನೋ ಅನ್ನಿಸುತ್ತಿದೆ. ಎಂಬುದು ಆಚಾರ್ಯರ ಅನಿಸಿಕೆ...   

****

Gangā, descending from the heavens, ‘fell’ on to the head of Śiva; this is deemed to be a slide in her position. Thence, she went on to ‘fall’ on the Himālayas.  Himālayas form the higher reaches of the earth; from the higher ranges of the Himālayas, flowing as multiple streams, Gangā descended to the earth, fell lower and continuing her flow, merged into the ocean … Much the same is the degradation in the lives of fools, says Bhartruhari.

Our Acharyaru has opined that Bhartruhari’s comparison of the slide in the lives of fools to the descending of Ganga, is not very convincing … Poetically too, this symbolism is not harmonious …

Gangā is called स्वर्गंगा (svargaṅgā). From the abode of gods, Gangā descended to the earth i.e. it fell onto the crown of Śiva. ‘To descend,’ implies fall into a bad place. How can anyone construe the landing of Gangā from the heavens onto the head of Śiva as ‘descending,’ then? The legendary Kannada poet Dr. Da Rā Bendre, has however explained this process insightfully … He has said, ‘This does not amount to the slide of Gangā, but her incarnation … She came over from the heavens for our redemption’ … This view of Bendre transforms it to an ‘incarnation of Gangā.’     

Gangā’s movement from the heavens to earth, leads to its slide from a higher position to a lower one, those who are profligate, slide to degradation in living, and they would never be able to regain positions of eminence, is the message of Bhartruhari here.

Our Acharyaru has pointed out that it would augur well to disregard the metaphor of Ganga but sift the message of degradation that Bhratruhari gives us here.
There is no question of attaching ‘prudence’ to the waters of Gangā … water is an inert substance and it’s natural tendency is to flow from higher to lower levels … 
Gangā descended to the earth with a purpose … to redeem Bhagīrata, the childless ruler of Ayodhya, from the sins of his forefathers. Gangā’s action also brought salvation to the 60,000 sons of Sagara.

Gangā, in the modern day, is no longer pristine … We continue to dump all kinds of waste into her flowing waters and have made it unfit for the purifying ritual of  ‘Gangā snāna.’ Vedavyāsaru had stated in the Dvāpara era itself, that 5000 years post the Dvāpara era, ‘Gangā would cease to exist on the earth … she will return to the heavens.’ Our Acharyaru has reflected that these words seem to be ringing true now …